ಶಿವಮೊಗ್ಗ:ಇಂದು ಶಿವಮೊಗ್ಗದಲ್ಲಿ 2 ಬಡಾವಣೆಗಳಲ್ಲಿ ಸದಸ್ಯತ್ವ ಸೇರ್ಪಡೆ ಕಾರ್ಯಕ್ರಮ ನಡೆಸಲಾಯಿತು. ಅಂಬೇಡ್ಕರ್ ನಗರ ಹಾಗೂ ಮಲ್ಗೇನಹಳ್ಳಿ ಬಡಾವಣೆಗಳಲ್ಲಿ ಏಳುಮಲೈ (ಕೇಬಲ್ ಬಾಬು) ಒಟ್ಟಿಗೆ ನೇತೃತ್ವದಲ್ಲಿ ಈ ಸದಸ್ಯತ್ವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.

ಈ ಸದಸ್ಯತ್ವ ಸೇರ್ಪಡೆ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಜನರು ಆಮ್ ಆದ್ಮಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡರು.ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಏಳುಮಲೈ (ಕೇಬಲ್ ಬಾಬು) ಅವರು ಅಂಬೇಡ್ಕರ್ ಬರೆದಿರುವ ಸಂವಿಧಾನ ದಂತೆ ಭಾರತದ ಬಡ ಜನರಿಗೆ ನಿಜವಾದ ಹಕ್ಕುಗಳನ್ನು ದೊರಕಿಸಿಕೊಡುವುದು ಆಮ್ ಆದ್ಮಿ ಪಕ್ಷದ ಉದ್ದೇಶವಾಗಿದೆ.

ಪಕ್ಷದ ರಾಷ್ಟ್ರೀಯ ಸಂಯೋಜಕರಾದ ಅರವಿಂದ್ ಕೇಜ್ರಿವಾಲ್ ರವರು ಬಡಜನರ ನಾಡಿಮಿಡಿತವಾಗಿದ್ದಾರೆ. ಜನಸಾಮಾನ್ಯರ ಹಕ್ಕಿಗಾಗಿ ಹೋರಾಟದ ಮುಖೇನ ಪ್ರಾರಂಭವಾಗಿದ್ದು ಆಮ್ ಆದ್ಮಿ ಪಕ್ಷ, ಈ ಕಾರಣಕ್ಕೆ ಯಾರೆಲ್ಲಾ ಬಡಜನರು, ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೋ ಅವರುಗಳು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸಿ ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಸಿಗುವಂತಹ ಎಲ್ಲ ಸವಲತ್ತುಗಳನ್ನು ಆಮ್ ಆದ್ಮಿ ಪಕ್ಷ ನಿಮ್ಮ ಮನೆಯ ಬಾಗಿಲಿಗೆ ತಲುಪಿಸುತ್ತಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಏಳುಮಲೈ ಕೇಬಲ್ ಬಾಬು ರವರೊಂದಿಗೆ (ಕೇಬಲ್) ಎಸ್ ಮುರುಗನ್, ಕಿರಣ್ ಗೆ ,ಮಾರ್ಕ್ ,ದಿಲೀಪ ಹಾಗೂ ಇನ್ನಿತರರು ಭಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…