ಗೃಹಿಣಿಯರು ಮನೆಯಿಂದ ಹೊರಬಂದು ಉದ್ಯಮದತ್ತ ಸಾಗುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಯೂತ್ ಹಾಸ್ಟೆಲ್ ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ವೆಂಕಟನಾರಾಯಣ ಹೇಳಿದರು.

ಇಂದು ಸ್ವೇದ ಮಹಿಳಾ ಉದ್ಯಿಗಳ ಸಂಘ, ಮಥುರಾ ಪ್ಯಾರಡೈಸ್ ಎದುರಿನ ಪ್ರವಾಸಿ ಕಾರಿನ ನಿಲ್ದಾಣದಲ್ಲಿ ಹಮ್ಮಕೊಂಡಿದ್ದ ಸ್ವೇದ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಉದ್ಯಮಕ್ಕೆ ಪ್ರೋತ್ಸಾಹ ಕೊಡುವ ಇಂತ ಕಾರ್ಯಕ್ರಮಗಳು ಅಭಿನಂದನೀಯ ಎಂದು ಅವರು ನುಡಿದರು.ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಎನ್. ಗೋಪಿನಾಥ್, ಯೂತ್ ಹಾಸ್ಟೆಲ್ ನ ರಾಜ್ಯ ಅಧ್ಯಕ್ಷರಾದ ಶ್ರೀ ಪ್ರಸನ್ನ
ಕಾರ್ಯದರ್ಶಿ ಶ್ರೀ ರವಿ ಕುಮಾರ್, ಶ್ರೀ ವಾಗೀಶ್, ಡಾ . ಅರವಿಂದ್ ,ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ.ಬಿ.ವಿ.ಲಕ್ಷ್ಮಿದೇವಿ ಗೋಪಿನಾಥ್, ನಿರ್ದೇಶಕಿ ಶ್ರೀಮತಿ ಸಹನಾ ಚೇತನ್ ಮತ್ತು ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…