ಶಿವಮೊಗ್ಗ ಜಿಲ್ಲಾ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಇಂದು ಶಿವಮೊಗ್ಗ ಶರಾವತಿ ನಗರದಲ್ಲಿ ಜನ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಧ್ಯೇಯೋದ್ದೇಶಗಳೊಂದಿಗೆ, ಪಕ್ಷವೂ ಇದುವರೆಗೂ ದೆಹಲಿ ಹಾಗೂ ಪಂಜಾಬ್ ನಲ್ಲಿ ಮಾಡಿರುವ ಸಾಧನೆಯನ್ನು ಜನರ ಮನಮುಟ್ಟುವಂತೆ ತಿಳಿಸಿ ಹೇಳಲಾಯಿತು.

ಈ ಪ್ರಚಾರದ ನಂತರ ಆಮ್ ಆದ್ಮಿ ಪಕ್ಷದ ಯುವ ಮುಖಂಡರಾದ ಕಿರಣ್.ಕೆ ನೇತೃತ್ವದಲ್ಲಿ ಸುಮಾರು ನಾನ್ನೂರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು.ಇದರ ನಂತರ ಸ್ವಯಂ ಸೇವಾ ಸಂಸ್ಥೆಯಾಗಿರುವ ನೋವಾ ಸಂಸ್ಥೆಗೆ ಭೇಟಿ ನೀಡಿ ಅಲ್ಲಿರುವಂತಹ ನಿರಾಶ್ರಿತರಿಗೆ ಹಾಗೂ ವೃದ್ಧರಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಕಿರಣ್. ಕೆ ರವರೊಂದಿಗೆ ಲಕ್ಷ್ಮೀಶ್, ಆಲ್ಬರ್ಟ್ ವಿಜಯ್,ನಜೀರ್ ಅಹ್ಮದ್,ಹರ್ಷಿತಾ ರಾಣಿ ಮಹೇಂದ್ರಕರ್,ಶ್ರವಂತಿ ಸಚಿನ್,ಮಂಜುನಾಥ್,ಅರುಳ್ ಮತ್ತೆ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…