ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಇಂದು ಮಾನ್ಯ ಕ್ರೀಡಾ ಸಚಿವರಾದ ಶ್ರೀ ಕೆ ಸಿ ನಾರಾಯಣಗೌಡ ರವರನ್ನು ದಕ್ಷಿಣ ಭಾರತದ ಬಹುದೊಡ್ಡ ಕರಾಟೆ ಪಂದ್ಯಾವಳಿಯಾದ ಶಿವಮೊಗ್ಗ ಓಪನ್ ಮೂರನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಗೆ ಉದ್ಘಾಟಕರಾಗಿ ಆಗಮಿಸಲು ಆಹ್ವಾನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮೆಸ್ಕಾಂ ನಿರ್ದೇಶಕರಾದ ಶ್ರೀ ದಿನೇಶ್ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಮೊಗ್ಗ ವಿನೋದ್ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ನ ಗೌರವಾಧ್ಯಕ್ಷರಾದ ಆರ್ ರಾಘವೇಂದ್ರ ಸಿಟಿ ಕರಾಟೆ ಅಸೋಸಿಯೇಶನ್ ನ ಅಧ್ಯಕ್ಷರಾದ ಉಷಾ ಉತ್ತಪ್ಪ ಮತ್ತು ಅಸೋಸಿಯೇಶನ್ ನ ಪ್ರಮುಖರಾದ ಶರವಣ ಜಸ್ಟಿನ್ ವೆಂಟೇಶ್ ಹರ್ಷಿತ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…