ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಅಂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವತಿಕೊಪ್ಪ ಗ್ರಾಮದ ದೊಡ್ಡಕೆರೆ ಏರಿ ಮೇಲಿನ ರಸ್ತೆ ಕುಸಿದಿದ್ದು ಮೂರು ದಿನವಾಗಿದ್ದರು ಸಹ ಯಾವದೇ ಜನಪ್ರತಿನಿಧಿಗಳು – ಅಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮಾಹಿತಿ ಕೊಟ್ಟರು ಸಹ ಯಾವದೇ ಇಲಾಖೆಯ ಅಧಿಕಾರಿಗಳು ಬಂದಿಲ್ಲವೆಂದು ಸ್ಥಳೀಯರು ಹಿಡಿ ಶಾಪ ಹಾಕಿದರು.

ಕೆರೆಯ ವಿಸ್ತೀರ್ಣ 150ರಿಂದ 160 ಎಕರೆ ಇದು ಈ ಕೆರೆ ಏರಿ ಒಡೆದಲ್ಲಿ ಕನಿಷ್ಠ ಪಕ್ಷ ಮೂರರಿಂದ ನಾಲ್ಕು ಗ್ರಾಮಗಳು ಜಲವೃತ ಗೋಳುವ ಸಂಭವವಿದ್ದು ಯಾವದೇ ಅಧಿಕಾರಗಳು ಯಾವದೇ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿರುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…