ಶಿವಮೊಗ್ಗ ಪ್ರತಿಷ್ಠಿತ ಸಮಾಜಗಳಲ್ಲಿ ಒಂದಾದ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಂಸದರಾದ ಬಿ.ವೈ.ರಾಘವೇಂದ್ರ ರವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲಾಯಿತು.
ಬಂಟರ ಸಮಾಜದ ಅಧ್ಯಕ್ಷರಾದ ಡಾ. ಸತೀಶ್ ಕುಮಾರ್ ಶೆಟ್ಟಿ ರವರು ನಿಮ್ಮಿಂದ ಶಿವಮೊಗ್ಗ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ ಮುಂದೆಯೂ ಇದೇ ರೀತಿ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕೇಂದ್ರದ ಸಚಿವರಾಗಿ ಅಧಿಕಾರ ನಡೆಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಕೃಷ್ಣಯ್ಯ ಶೆಟ್ಟಿ , ಸುರೇಶ್ ಶೆಟ್ಟಿ , ದಿವಾಕರ್ ಶೆಟ್ಟಿ , ಅರುಣ್ ಶೆಟ್ಟಿ , ಕುಶಾಲ್ ಶೆಟ್ಟಿ , ಶೇಖರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…