ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಮಹಾನಗರ ಪಾಲಿಕೆಯ ಸದಸ್ಯರ ಸ್ಥಳೀಯ ಅನುದಾನದಲ್ಲಿ ಜೈಲ್ ರಸ್ತೆ ಸೇತುವೆ ಪಕ್ಕ ,6ನೇ ಮುಖ್ಯರಸ್ತೆ ಚಕ್ರವರ್ತಿ ವೃತ್ತ, 4ನೇ ಮುಖ್ಯರಸ್ತೆ ಓಂ ಸರ್ಕಲ್ , ನಾಲ್ಕನೇ ಮುಖ್ಯರಸ್ತೆಯ ಶ್ರೀ ಮಾತಂಗಮ್ಮ ದೇವಿ ದೇವಸ್ಥಾನದ ವೃತ್ತ ಹಾಗೂ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಸ್ಥಾನದ ವೃತ್ತದಲ್ಲಿ ಹೈ ಮಾಸ್ಟ್ ದೀಪಗಳನ್ನು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಹಾಗೂ ವಾರ್ಡಿನ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಕೆ ರಂಗನಾಥ್ ವಾರ್ಡಿನ ಪ್ರಮುಖರಾದ ನಿವೃತ್ತ ಶಿಕ್ಷಕರಾದ ಎಸ್ಎಂ ಲೋಕೇಶಪ್ಪ, ಕೆಂಚಣ್ಣ. ಕುಬೇರಪ್ಪ, ಗೋಪಿ ಆಚಾರಿ, ಮಂಜುನಾಥ್, ಶ್ರೀನಾಥ್, ಬೆನಕ ರಮೇಶ್, ಓಂಕಾರಮ್ಮ, ಜಯಮ್ಮ, ಶಿವು, ಸುನಿಲ್, ಚಂದ್ರು ಗೆಡ್ಡೆ, ಕೆ ಪ್ರಕಾಶ್, ಪ್ರವೀಣ್ ಸಾಳಂಕೆ, ಅರ್ಚಕರಾದ ಯೋಗೀಶ್ ಉಡುಪ ರವರು ಹಾಗೂ ಬಡಾವಣೆಯ ನಾಗರೀಕರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…