SANDALWOOD NEWS…

ಈ ದಿನ ಶುಭ ದಿನ. ಇಂತಹ ಶುಭ ದಿನದಲ್ಲಿ ಕರ್ನಾಟಕ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯ ಕೊರುತ್ತಾ, ನನ್ನ ನಲ್ಮೆಯ ಮತ್ತು ನಮ್ಮ ಚಿತ್ರದ ನಾಯಕ ನಟರಾದಂತಹ, ಶ್ರೀ ಪ್ರಮೋದ್ ಶೆಟ್ಟಿಯವರ ಹುಟ್ಟುಹಬ್ಬಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಕೊರುತ್ತಾ, ಸುಮಾರು ಹನ್ನೆರಡು ವರ್ಷಗಳ ಹಿಂದೆ ರಂಗಭೂಮಿಯ ಮೂಲಕ ನಾನು ಪಾದಾರ್ಪಣೆ ಮಾಡಿ, ಅದರ ಜೊತೆ ಸಮಾಜ ಸೇವೆ ಮತ್ತು ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿ, ನನ್ನ ಪರಮಾಪ್ತ ಗೆಳೆಯನ ಪರಂವಾಹ್ ನಿರ್ಮಾಣ ಸಂಸ್ಥೆಯಲ್ಲಿ ರಕ್ಷಿತ್ ಶೆಟ್ಟಿಯವರ ಅಖಿಲ ಭಾರತ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದೇನೆ.

ಈಗ ನನ್ನ ಕನಸಿನ ಕೂಸು ಮತ್ತು ನನ್ನ ಸಂಕಲ್ಪದಂತೆ, ಸ್ಟೆಪ್ ಅಪ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಮೊದಲ ಬಾರಿಗೆ ಚಲನಚಿತ್ರದ ನಿರ್ಮಾಣವನ್ನೂ ಆರಂಭಿಸಿ, ಕನ್ನಡ ಚಿತ್ರಕ್ಕೆ ಒಂದೊಳ್ಳೆ ಚಲನಚಿತ್ರವನ್ನು ಕೊಡುಗೆಯಾಗಿ ನೀಡುವ ತವಕಲ್ಲಿದ್ದೇನೆ.ಅದರಂತೆ ಕನ್ನಡ ಚಲನಚಿತ್ರಕ್ಕೆ ಸೇವೆಯನ್ನು ಸಲ್ಲಿಸುತ್ತಾ, ಪರಿಪೂರ್ಣ ಮಹದಾಸೆಯನ್ನು ಪೂರೈಸಲು ಸಹಕರಿಸುತ್ತಿರುವ ನಮ್ಮ ಚಿತ್ರ ತಂಡಕ್ಕೆ ಮತ್ತು ನಿಮ್ಮೆಲ್ಲರ ಪ್ರೀತಿ, ಸಹಕಾರ ಹಾಗೂ ವಿಶ್ವಾಸವನ್ನು ಮತ್ತೆ ಕೇಳುತ್ತಿದ್ದೇನೆ ಎಂದು ಲೋಕೇಶ್ ಗೌಡ ಹೇಳಿದರು.

ವರದಿ ಪ್ರಜಾಶಕ್ತಿ…