ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಪತ್ರಿಕಾ ವಿತರಕರ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.

ವಿಜಯ ಕರ್ನಾಟಕ ಪತ್ರಿಕೆಯ ಬ್ಯೂರೋ ಚೀಫ್ ಆದಂತಹ ಸತೀಶ್ ,ದಿ ಹಿಂದೂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯ ವಿತರಕರಾದ ಯುವರಾಜ್ ಅವರನ್ನು ಸನ್ಮಾನಿಸಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್ ಮಾಲತೇಶ್ ಗೌರವಾಧ್ಯಕ್ಷರಾದ ಪರಮೇಶ್ವರಪ್ಪ ಉಪಾಧ್ಯಕ್ಷ ರಾಮು ಜಿ ಪ್ರಧಾನ ಕಾರ್ಯದರ್ಶಿಯಾದ ಮುಕ್ತಾರ್ ಅಹ್ಮದ್( ನಜೀರ್ ) ನಿರ್ದೇಶಕರು ಹಾಗೂ ಸದಸ್ಯರುಗಳಾದ ವಸಿಕ್ಉಲ್ ನಿರ್ದೇಶಕರು ಹರ್ಷ ಪ್ರವೀಣ್ ಕುಮಾರ್ ಶ್ರೀಧರ್ ಮೂರ್ತಿ ನವೀನ್ ಕುಮಾರ್ ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ವಿತರಕರಾದ ಸತೀಶ್ ಹಾಗೂ ಬಿ ಎನ್ ಗಣೇಶ್ ಕನ್ನಡಪ್ರಭ ಪತ್ರಿಕೆಯ ಮುಖ್ಯ ವಿತರಕರಾದ ಯೋಗೀಶ್ ಪಿಎಸ್ ಪ್ರಜಾವಾಣಿ ಪತ್ರಿಕೆಯ ಮುಖ್ಯ ವಿತರಕರಾದ ಮಂಜುನಾಥ್ ಪಟೇಲ್ ವಿಜಯವಾಣಿ ಪತ್ರಿಕೆಯ ಮುಖ ವಿತರಕರಾದ ಉಮೇಶ್ ಎಸ್ ಎಂ ದೇವರಾಜ್ ಶೆಟ್ರು ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…