ತೀರ್ಥಹಳ್ಳಿ ನ್ಯೂಸ್…

ಮಾಜಿ ಸಚಿವರು ಕೆಪಿಸಿಸಿ ವಕ್ತಾರರಾದ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಹೊಸನಗರ ತಾಲ್ಲೂಕು ಹುಂಚಾ ಹೋಬಳಿಯ ಹೊನ್ನೆಬೈಲ್ ಗ್ರಾಮ ಹಡ್ಲುಬೈಲ್ ವಾಸಿ ಶ್ರೀಮತಿ ಜ್ಯೋತಿ ಕೋಂ ರಾಮಪ್ಪ ಇವರು ಅನೇಕ ವರ್ಷಗಳಿಂದ ವಾಸಿಸುತ್ತಿದ್ದು ಇವರ ಮನೆಯನ್ನು ಹೊಸನಗರ ಕಂದಾಯ ಅಧಿಕಾರಿಗಳು ಜೆಸಿಬಿಯಿಂದ ತೆರವು ಮಾಡಿ ಒಕ್ಕಲೆಬ್ಬಿಸಿದ್ದು ಮತ್ತು ಹುಂಚಾ ಹೋಬಳಿಯ ಇತರ ಭಾಗಗಳಲ್ಲಿ ಅಧಿಕಾರಿಗಳು ರೈತರಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಮತ್ತು ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಹಡ್ಲುಬೈಲ್ ನಿಂದ ಹುಂಚ ನಾಡಕಚೇರಿವರೆಗೆ 6 ಕಿಲೋ ಮೀಟರ್ ಗಳ ಪಾದಯಾತ್ರೆ ಮಾಡಿ ನಾಡ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು ನಂತರ ತಹಶೀಲ್ದಾರ್ ಗೆ ಮೆಮೊರಂಡಮ್ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕಲಗೋಡು ರತ್ನಾಕರ್ ,ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ ,ತೀರ್ಥಹಳ್ಳಿ ಬ್ಲಾಕ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ ,ಹೊಸನಗರ ಬ್ಲಾಕ್ ನ ಸದಸ್ಯರಾದ ಬಿ ಜಿ ನಾಗರಾಜ್ ,ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಮರನಾಥ್ ಶೆಟ್ಟಿ, ಪುಟ್ಟೊಡು ರಾಘವೇಂದ್ರ ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ ಪಿ ರಾಮಚಂದ್ರ ,ಮಾಜಿ ತಾಲ್ಲೂಕು ಸದಸ್ಯರಾದ ಚಂದ್ರಮೌಳಿ ಗೌಡ್ರು ಏರಿಗೆ ಉಮೇಶ್ ,ಹುಂಚ ಕಾಂಗ್ರೆಸ್ ಅಧ್ಯಕ್ಷರಾದ ಸುಣ್ಣದಕಲ್ ಗುರು ,ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ ,ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.

ವರದಿ ಪ್ರಜಾಶಕ್ತಿ…