ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಜಾತ್ಯತೀತ ಜನತಾದಳ ಅಧ್ಯಕ್ಷ ಎಂ. ಶ್ರೀಕಾಂತ್ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿದರು.

ಹಿಂದಿ ದಿವಸ್ ಆಚರಣೆ ಹಿಂದಿ ಭಾಷೆಗಳ ರಾಜ್ಯಗಳಿಗೆ ಸೀಮಿತವಾಗಿರಲಿ ನಮಗೆ ಅದರ ಅವಶ್ಯಕತೆ ಇಲ್ಲವೆಂದು ಆಗ್ರಹಿಸಿದರು.ಹೊರಗಿನವರು ದಾಳಿ ಪ್ರಯತ್ನಕ್ಕೆ ಹಿಂದಿನಿಂದಲೂ ಕನ್ನಡಿಗರು ತಕ್ಕ ಉತ್ತರ ಕೊಡುತ್ತ ಬಂದಿದ್ದಾರೆ. ಈಗಲೂ ಸಹ ಬಲವಂತದ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ , ಪಾಲಾಕ್ಷಿ , ಭಾಸ್ಕರ , ನರಸಿಂಹ , ಜಗದೀಶ್ ಸಿಜು ಪಾಷಾ , ಶಾಂತ ಸುರೇಂದ್ರ , ಕವಿತಾ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…