ಶ್ರೀಮತಿ ವಿದ್ಯಾ ಸರಸ್ವತಿ ಕನ್ನಡ ಅತಿಥಿ ಉಪನ್ಯಾಸಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ರಿಪ್ಪನಪೇಟೆ ಇವರಿಗೆ ಮಂಗಳೂರು ವಿಶ್ವವಿದ್ಯಾಲಯ ಪಿ.ಎಚ್.ಡಿ (PHD) ಪದವಿ ಪ್ರದಾನ ಮಾಡಿದೆ.

ಎಸ್ ವಿ ಪಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಅಜಯ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಕನ್ನಡ ಕಾದಂಬರಿಗಳಲ್ಲಿ ಸಂಸ್ಕೃತ ಸಂರಚನೆ ಸ್ವರೂಪ ( 1974 ರ ನಂತರದ ಪ್ರಮುಖ ಕಾದಂಬರಿಗಳನ್ನು ಅನುಲಕ್ಷಿಸಿ ) ಎಂಬ ಮಹಾ ಪ್ರಬಂಧಕ್ಕೆ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರು ದಿ. ಐತಪ್ಪ ಸಾಲಿಯಾನ್ ( ನಿವೃತ್ತ ಪೊಲೀಸ ಉಪನಿರೀಕ್ಷಕರು ) ಹಾಗೂ ಲಲಿತ ದಂಪತಿಯ ಸುಪುತ್ರಿ , ಶ್ರೀಯುತ ನೂತನ್ ಮೂಲ್ಯ ರವರ ಧರ್ಮಪತ್ನಿ ಆಗಿದ್ದಾರೆ.
ಈ ಗೌರವಾನ್ವಿತ ಡಾಕ್ಟರೇಟ್ ಪುರಸ್ಕತರಿಗೆ ಸಮಸ್ತ ಪ್ರಜಾಶಕ್ತಿ ವೆಬ್ ನ್ಯೂಸ್ ತಂಡದ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು…

ವರದಿ ಪ್ರಜಾಶಕ್ತಿ…