ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರ ಹುಟ್ಟು ಹಬ್ಬದ ಪ್ರಯುಕ್ತ ಸೌಗಂಧಿಕಾ ರಘುನಾಥ್ ರವರ ಸರ್ವಾಧಾರ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ಶಿಬಿರ ಹಾಗು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಹೆಚ್ ಎಸ್ ಸುಂದರೇಶ್ ಉದ್ಘಾಟಿಸಿದರು.

ಕೆಪಿಸಿಸಿ ಡಾಕ್ಟರ್ ಸೆಲ್ ನ ಮಾಜಿ ಅಧ್ಯಕ್ಷರಾದ ಡಾಕ್ಟರ್ ರಾಘವೇಂದ್ರ ಕದ್ರಿ ರವರು ಉಸ್ತುವಾರಿ ಪಡೆದು ಆರೋಗ್ಯ ಶಿಬಿರ ನಡೆಸಿ ಕೊಟ್ಟರು.ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಗಳಾದ ಸುಬ್ಬಯ್ಯ , ನಾರಾಯಣ ಹೃದಯಾಲಯ , ಶಂಕರ್ ನೇತ್ರಾಲಯ , ಶರಾವತಿ ಡೆಂಟಲ್ ಕಾಲೇಜಿನಿಂದ ಸುಮಾರು ನೂರಕ್ಕೂ ಹೆಚ್ಚು ವೈದ್ಯರುಗಳು ಸಿಬಿರದಲ್ಲಿ ಪಾಲ್ಗೊಂಡಿದ್ದರು.ಬೆಳಿಗ್ಗೆ 9 ರಿಂದ ಶುರುವಾದ ಶಿಬಿರ ಸಂಜೆ 4 ಗಂಟೆಯ ವರೆಗೆ ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯಲ್ಲಿ ನಡೆಯಿತು.ಸುಮಾರು 2000 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಶಿಬಿರದ ಉಪಯೋಗ ಪಡೆದುಕೊಂಡರು.

ವರದಿ ಪ್ರಜಾಶಕ್ತಿ…