ಶಿವಮೊಗ್ಗ ನಗರದ ಕಲ್ಪತರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಐದನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಸೊಸೈಟಿಯ ಅಧ್ಯಕ್ಷರಾದ ಪ್ರದೀಪ್ ಮಿತ್ತಲ್ ರವರು ಉದ್ಘಾಟಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಗೌರವಾನ್ವಿತ ಸದಸ್ಯರ ಸಹಕಾರವನ್ನು ಶ್ಲಾಘಿಸಿ ಮುಂದೆಯೂ ಇದೇ ರೀತಿ ನಿಮ್ಮ ಸಹಕಾರ ಇದ್ದಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಜಿ.ಡಿ. ಮಂಜುನಾಥ್ ಮಾತನಾಡುತ್ತಾ ಸಣ್ಣ ಉದ್ದಿಮೆದಾರರು ಹಾಗೂ ವ್ಯಾಪಾರಸ್ಥರನ್ನು ರಾಷ್ಟ್ರೀಕೃತ ಬ್ಯಾಂಕುಗಳು ಕಡೆಗಣಿಸಿರುವುದರಿಂದ ನೀವೆಲ್ಲರೂ ಇಂತಹ ಸಹಕಾರಿ ಸಂಸ್ಥೆಗಳ ಧನ ಸಹಾಯಪಡೆದು ಹೆಚ್ಚಿನ ಆರ್ಥಿಕ ಪ್ರಗತಿ ಸಾಧ್ಯಸಿ ಸಕಾಲಕ್ಕೆ ತಾವು ಪಡೆದ ಹಣವನ್ನು ಸಕಾಲಕ್ಕೆ ಪಾವತಿಸುವುದರಿಂದ ಇನ್ನೊಬ್ಬ ಸದಸ್ಯರಿಗೆ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸಹಾಯ ಮಾಡಲು ಸಾಧ್ಯವಾಗುತ್ತದೆ ಆದ್ದರಿಂದ ಅನುಕೂಲಕ್ಕೆ ಅನುಗುಣವಾಗಿ ಸಾಲವನ್ನು ಪಡೆದು ಸಕಾಲಕ್ಕೆ ಹಿಂದಿರುಗಿಸಿ ತಮ್ಮ ಆರ್ಥಿಕ ಅಭಿವೃದ್ಧಿಯೊಂದಿಗೆ ಸಹಕಾರಿ ಸಂಸ್ಥೆಯ ಉನ್ನತಿಗೆ ಸಹಕಾರಿಗಳಾಗಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಎನ್. ಎಂ. ಕೃಷ್ಣ, ಆರ್. ಮಂಜುನಾಥ್, ಎಂ. ಎಂ. ಗೋಪಿ, ಎಸ್. ಎಚ್. ಕೇಶವಮೂರ್ತಿ, ಶ್ರೀಮತಿ ಎಸ್, ಹೇಮಲತಾ ಜಿ. ಡಿ. ಮಂಜುನಾಥ್,ಶ್ರೀಮತಿ ಸೌಮ್ಯ ಎಸ್. ಎಂ. ಮಹೇಶ್, ಕೆ.ಶೇಖರ್, ಎ.ಸುರೇಶ್, ಜೆ. ಸತೀಶ್ , ಉಪಸ್ಥಿತರಿದ್ದರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಅನಿತಾ ಸರ್ವರನ್ನು ಸ್ವಾಗತಿಸಿ ಕೃಷ್ಣ ವಂದಿಸಿದರು.

ವರದಿ ಪ್ರಜಾಶಕ್ತಿ…