ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುಂಸಿ, ಹಾರ್ನಹಳ್ಳಿ, ಹೊಳಲೂರು, ಹಸೂಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹರಪನಹಳ್ಳಿ ಕ್ಯಾಂಪ್, ಹಾರೊಬೆನವಳ್ಳಿ, ಸಂತೆಕಡೂರು, ಬೇಡರಹೊಸಹಳ್ಳಿ, ಹನಸವಾಡಿ, ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಮಳೆಯಿಂದ ಹಾನಿಗಿಡಾದ 2022-2023ನೇ ಸಾಲಿನ ಮನೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಿ ಶ್ರೇಣಿ ಹಂತದ ಮನೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಉಪ ತಹಶಿಲ್ದಾರ್, ಸಹಾಯಕ ನಿರ್ದೆಶಕರು ತಾ.ಪಂ,ಕಂದಾಯ ಇಲಾಖೆ ಅಧಿಕಾರಿಗಳು ಪ್ರಮುಖರು, ಮುಖಂಡರುಗಳು, ಕಾರ್ಯಕರ್ತರುಗಳು, ಪ್ರಮುಖರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…