ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಮೂಹಿಕ ಶ್ರೀ ಸತ್ಯ ನಾರಾಯಣಸ್ವಾಮಿ ಪೂಜಾ ಉದ್ಘಾಟಿಸಿದರು.

ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕುಂಸಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಶ್ರೀ ಕ್ಷೇತ್ರ ಧರ್ಮಸ್ಥಳ ಪದ್ಮವಿಭೂಷಣ ರಾಜರ್ಷಿ ಡಾ!! ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಡಾ!! ಹೇಮಾವತಿ ವಿ.ಹೆಗ್ಗಡೆ ದಂಪತಿಗಳ ಮಾರ್ಗದರ್ಶನದೊಂದಿಗೆ ಕೌಟುಂಬಿಕ ಸೌಹಾರ್ದತೆ ಹಾಗೂ ಗ್ರಾಮ ಸುಭಿಕ್ಷೆಗಾಗಿ ವಲಯ ಮಟ್ಟದ ಕಾರ್ಯಕ್ರಮವು ಕೂಡ ಏರ್ಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಶ್ರೀ ಮ.ನಿ.ಪ್ರ ನೀಲಕಂಠ ಮಹಾಸ್ವಾಮಿಗಳು, ಚೌಕಿಮಠ, ತಮ್ಮಡಿಹಳ್ಳಿ ನಾಗರಾಜ್, ಮಾಜಿ.ಜಿ.ಪಂ ಸದಸ್ಯರು, ಶಾರದ ರಂಗನಾಥ್, ಗ್ರಾ.ಪಂ ಅಧ್ಯಕ್ಷರು, ಶಿವಾನಂದಪ್ಪ ಆಯನೂರು, ಅರುಣ್, ಉಮೇಶ್, ಕುಂಸಿ ಮಂಜು, ಧರ್ಮು, ವೇದಾಂತ್, ಚೆನ್ನಮ್ಮ, ಪ್ರಶಾಂತ್ ಮುಂತಾದವರುಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…