ಪ್ರಸ್ತುತ ಎಲ್ಲಾ ವಸ್ತುಗಳು ಆನ್ ಲೈನ್ ನಲ್ಲಿ ಲಭ್ಯವಿದ್ದು ಆನ್ ಲೈನ್ ಮಾರ್ಕೆಟ್ ಬೃಹದಾಕಾರವಾಗಿ ಬೆಳೆದಿದೆ. ಕುಂಬಾರ ಸಮಾಜದ ಸಹೋದರರು ತಯಾರಿಸಿದ ಮಣ್ಣಿನ ವಸ್ತುಗಳು ಕೂಡ ಇದರಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಪಾಟರಿ ಡೆವಲಪ್ ಮೆಂಟ್ ಸೆಂಟರ್ ಅನ್ನು ಸ್ಥಾಪಿಸಿ ಅದರ ಮೂಲಕ ಪಾಟರಿ ಆ್ಯಪ್ ತಯಾರಿಸಲಾಗಿದೆ. ಇದರ ಮುಖ್ಯ ಉದ್ದೇಶ ಮಣ್ಣಿನ ವಸ್ತುಗಳನ್ನು ಗ್ರಾಹಕರಿಗೆ ಇ ಕಾಮರ್ಸ್ ವ್ಯವಸ್ಥೆಯ ಮೂಲಕ ತಲುಪಿಸುವುದು.

ಕರ್ನಾಟಕ ಕುಂಬಾರರ ಯುವ ಸೈನ್ಯದ ಗೌರವಾಧ್ಯಕ್ಷರಾದ ಪ್ರವೀಣ್ ಅವರ ಮಾರ್ಗದರ್ಶನದಲ್ಲಿ , ರಾಜ್ಯಾಧ್ಯಕ್ಷರಾದ ಶಂಕರ್ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷರಾದ ರಾಜಶೇಖರ್ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಕಾರ್ಯಗತ ಗೊಳಿಸಲಾಗಿದ್ದು ,
ಈ ಸಂದರ್ಭದಲ್ಲಿ ಡಾ.ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಕಲ್ಮಠ ಹೊನ್ನಾಳಿ ಮತ್ತು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹೊನ್ನಾಳಿ-ನ್ಯಾಮತಿ ಶಾಸಕರಾದ ಮಾನ್ಯ ಎಂ ಪಿ ರೇಣುಕಾಚಾರ್ಯ ರವರು ನೆರವೇರಿಸಿದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153