ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಚೆನಹಳ್ಳಿ ಗ್ರಾಮ ಪಂಚಾಯಿತಿಯ ಬೀರನಕೆರೆ ಗ್ರಾಮದ ನಿವಾಸಿಯಾದ ಮಂಜಾನಾಯ್ಕರವರ ಮಗ ರವಿನಾಯ್ಕ ರವರು ಕೆರೆಯಲ್ಲಿ ಹಸುವಿಗೆ ನೀರು ಕುಡಿಸಲು ಹೋಗಿ ಕಾಲುಜಾರಿ ಬಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ. ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಬಿ.ಅಶೋಕ ನಾಯ್ಕ ರವರು ಕುಟುಂಸ್ಥರಿಗೆ ಸಾಂತ್ವನಾ ಹೇಳಿ ತಾಂಡ ಅಭಿವೃದ್ಧಿ ನಿಗಮದ ವತಿಯಿಂದ 1.00.000 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್ಕನ್ನು ವಿತರಿಸಿದರು.

ಈ ಸಂದರ್ಭದಲ್ಲಿ ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕರಾದ ರಮೇಶ್ ನಾಯ್ಕ, ರುದ್ರಪ್ಪ, ಶಿವಾಜಿ, ವಾಸುನಾಯ್ಕ, ಅಂಚಿನಾಯ್ಕ, ಲೋಕಣ್ಣ, ದಶರಥನಾಯ್ಕ, ಸಂತೋಷ, ಮುಂತಾದಯ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…