ಧರ್ಮಸ್ಥಳ ನ್ಯೂಸ್…

ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ರವರ ಆಶೀರ್ವಾದ ಪಡೆದ ಕಾಂತಾರ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ.

ವೀರೇಂದ್ರ ಹೆಗ್ಗಡೆ ರವರ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ರವರಿಗೆ ಸನ್ಮಾನಿಸಿದರು. ನಂತರ ಮಾತನಾಡಿದ ರಿಷಬ್ ಶೆಟ್ಟಿ ರವರು ಕಾಂತಾರ ಚಿತ್ರ ಶುರು ಮಾಡುವ ಮೊದಲೇ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮಾಡಿ ವೀರೇಂದ್ರ ಹೆಗಡೆ ರವರ ಆಶೀರ್ವಾದ ಪಡೆದು ಚಿತ್ರವನ್ನು ಆರಂಭಿಸಿದ್ದೇವೆ ಎಂದರು.

ಈಗ ಕಾಂತಾರ ಚಿತ್ರ ವಿಶ್ವದ ಎಲ್ಲರ ಪ್ರೀತಿಯ ಜನರ ಮನಸ್ಸಿನಲ್ಲಿ ಖುಷಿ ತಂದು ಕೊಟ್ಟಿದೆ ಎಂದು ಭಾವಿಸಿದ್ದೇನೆ.ವೀರೇಂದ್ರ ಹೆಗಡೆ ರವರು ಚಿತ್ರ ನೋಡಿ ಸಂತಸ ವ್ಯಕ್ತಪಡಿಸಿರುವುದು ಅ ಮಂಜುನಾಥ ಸ್ವಾಮಿ ನೋಡಿ ಆಶೀರ್ವಾದ ಮಾಡಿದಷ್ಟು ಖುಷಿಯಾಯಿತು ಎಂದರು.ಜೊತೆಯಲ್ಲಿ ಪ್ರಮೋದ್ ಶೆಟ್ಟಿ ದಂಪತಿ ಇದ್ದರು.

ವರದಿ ಪ್ರಜಾಶಕ್ತಿ…