ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ವಜ್ರೇಶ್ವರಿ ಗಣಪತಿ ದೇವಸ್ಥಾನದ ಹತ್ತಿರ ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯರ ಅನುದಾನದ ಸುಮಾರು 25 ಲಕ್ಷ ರೂ ವೆಚ್ಚದ ಬಾಕ್ಸ್ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಹಾಗೂ ವಾರ್ಡಿನ ಸದಸ್ಯರಾದ ರೇಖಾ ರಂಗನಾಥ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡರದ ಕೆ.ರಂಗನಾಥ್ ವಾರ್ಡಿನ ಪ್ರಮುಖರಾದ ವಿ,ಗೋಪಿ, ದಿನೇಶ್, ಹರೀಶ್, ವಿನಯ್, ಜಗದೀಶ್, ಶಿವಮೂರ್ತಪ್ಪ, ಚಂದ್ರು ಗೆಡ್ಡೆ, ಸತ್ಯನಾರಾಯಣ, ಅರ್ಚಕರಾದ ಯೋಗೀಶ್ ಉಡುಪ, ಹಾಗೂ ವಾರ್ಡಿನ ಪ್ರಮುಖರು ಮಹಿಳೆಯರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…