ಕೋವಿಡ ಸಾಂಕ್ರಾಮಿಕದ ವಿಷಮ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ 2021-22ನೇ ಸಾಲಿನಿಂದ ಅನ್ವಯವಾಗುವಂತೆ ಕಾನೂನು ತಿದ್ದುಪಡಿ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಹಲವು ಪಟ್ಟು ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ.
ಎಸ್ .ಆರ್ .ದರ ಆಧರಿಸಿ ವಾಸದ ಮನೆಗಳು , ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಕಟ್ಟಡಗಳು ಮತ್ತು ಖಾಲಿ ನಿವೇಶನಗಳಿಗೆ ಈ ಹಿಂದಿನ ವರ್ಷದ ತೆರಿಗೆಯ ಮೇಲೆ ಹಲವು ಪಟ್ಟು ಹೆಚ್ಚು ತೆರಿಗೆ ಏರಿಸುವುದು ತೆರಿಗೆದಾರರ ಮೇಲಿನ ಗದಾ ಪ್ರಹಾರವಾಗಿದೆ.ಕೋವಿಡ ಸಂಕಷ್ಟದ ಕಾರಣಕ್ಕಾಗಿಯೇ ಹಲವು ರಾಜ್ಯಗಳಾದ ಆಂಧ್ರಪ್ರದೇಶ , ತೆಲಂಗಾಣ , ತಮಿಳುನಾಡು , ಗುಜರಾತ್ ಹಾಗೂ ಇತರ ರಾಜ್ಯಗಳಲ್ಲಿ ಹಾಲಿ ತೆರಿಗೆಯ ಮೇಲೆ ಶೇಕಡ 50 ರ ರಿಯಾಯಿತಿ ನೀಡಿರುವುದು ನಮ್ಮ ರಾಜ್ಯದ ತೆರಿಗೆದಾರರಿಗೆ ಏಕಿಲ್ಲ?

ನಮ್ಮ ಬೇಡಿಕೆ…

*ಎಸ್ .ಆರ್ .ದರ ಆಧಾರಿತ ಆಸ್ತಿ ತೆರಿಗೆ ಕೈಬಿಡಿ
*ಸಂಕಷ್ಟದ ಈ ದಿನಗಳಲ್ಲಿ ತೆರಿಗೆ ಹೇರಿಕೆ ಬೇಡ
*ಆಸ್ತಿ ತೆರಿಗೆ ಕಾನೂನಿಗೆ ತಂದಿರುವ ತಿದ್ದುಪಡಿ ಮಸೂದೆ ಹಿಂದಕ್ಕೆ ಪಡೆಯಿರಿ
*ಪ್ರಸ್ತುತ ವರ್ಷಕ್ಕೆ ಶೇ.50 ರ ತೆರಿಗೆ ರಿಯಾಯಿತಿ ಘೋಷಣೆ ಮಾಡಿ
*ಹಿಂದಿನ ಸಾಲಿನ ಶೇ.15 ರ ಹೆಚ್ಚಳ ರದ್ದುಮಾಡಿ ಇದು ಶಿವಮೊಗ್ಗದ ಸಮಸ್ತ ತೆರಿಗೆದಾರರ ಒಕ್ಕೊರಲಿನ ಬೇಡಿಕೆ.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153