ಕಪನಹಳ್ಳಿ ನ್ಯೂಸ್…

ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ರಾಜ್ಯೋತ್ಸವ ನಡೆಯಿತು.ಕನ್ನಡ ಯುವಕ ಸಂಘ ಕಪ್ಪನಹಳ್ಳಿ ೨೫ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮ ಅಂಗವಾಗಿ ಗ್ರಾಮ ಪಂಚಾಯಿತಿ ಕಪ್ಪನಹಳ್ಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸದರಾದ ಬಿ ವೈ ರಾಘವೇಂದ್ರ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ಸಾಮ್ರಾಟ್ ರಾಕ್ ಸ್ಟಾರ್ ಗುರುಕಿರಣ್ ಶೆಟ್ಟಿ ರವರಿಗೆ ಸಂಸದರದ ಬಿ ವೈ ರಾಘವೇಂದ್ರ ರವರ ಸನ್ಮಾನಿಸಿದರು. ಸಂಸದರಾದ ಬಿ ವೈ ರಾಘವೇಂದ್ರ ಮಾತನಾಡಿ ವಿಶ್ವ ಮೆಚ್ಚಿದ ಕನ್ನಡ ಸಂಗೀತ ನಿರ್ದೇಶಕ ಗುರುಕಿರಣ್ ರವರು ನಮ್ಮ ಶಿಕಾರಿಪುರ ತಾಲೂಕಿನ ಕಪನ್ಹಳ್ಳಿ ಕಾರ್ಯಕ್ರಮಕೆ ಬಂದಿರುವುದು ನಮ್ಮೆಲ್ಲರಿಗೆ ತುಂಬಾ ಸಂತೋಷ ತಂದಿದೆ ಎಂದರು.

ವರದಿ ಪ್ರಜಾಶಕ್ತಿ…