ಶಿವಮೊಗ್ಗ ನಗರದ ಗೌಡ ಸಾರಸ್ವತ ಸಮಾಜದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಗೌಡಪಾದಚಾರ್ಯ ಕೈವಲ್ಯ ಮಠದ ಶ್ರೀ ಶಿವಾನಂದ ಸರಸ್ವತಿ ಶ್ರೀಗಳು ಮೊಕ್ಕಾಂ ಹೂಡಿದ್ದು ಸಂಸದ ಬಿ.ವೈ.ರಾಘವೇಂದ್ರರವರು ದೇವ ಮಂದಿರಕ್ಕೆ ಭೇಟಿ ನೀಡಿ ಶ್ರೀ ವೆಂಕಟರಮಣ ಹಾಗೂ ಶ್ರೀ ಭವಾನಿ ಶಂಕರ ದೇವರ ದರ್ಶನ ಪಡೆದು ಶ್ರೀಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಜಂಗಲ್ ರೆಸಾರ್ಟ್ನ ನಿರ್ದೇಶಕರಾದ ರಾಜೇಶ್‌ಕಾಮತ್, ದೇವರ್‌ರಾಜ್ ಅರಸು ನಿಗಮದ ನಿರ್ದೇಶಕರಾದ ಮಾಲತೇಶ್, ಎಂಎಸ್‌ಐಲ್ ನಿರ್ದೇಶಕರಾದ ವೆಂಕಟೇಶ್‌ನಾಯ್ಡು ಕೂಡ ಗುರುಗಳಿಂದ ಆಶೀರ್ವಾದ ಪಡೆದರು.
ಗೌಡ ಸಾರಸ್ವತ ಸಮಾಜದ ಅಧ್ಯಕ್ಷರಾದ ಭಾಸ್ಕರ್ ಕಾಮತ್, ಪ್ರಮುಖರಾದ ಸದಾನಂದ್ ನಾಯಕ್, ಗೋಪಾಲಕೃಷ್ಣ ಪಂಡಿತ್, ಹ್ರಷಿಕೇಶ್ ಪೈ, ಹರ್ಷಕಾಮತ್, ರಮೇಶ್ ಶೆಣೈ, ನರಸಿಂಹ ಕಿಣಿ ಮತ್ತಿತರರಿದ್ದರು.

ವರದಿ ಪ್ರಜಾಶಕ್ತಿ…