ಸ್ಟೇಟ್ ನ್ಯೂಸ್…

ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಷನ್ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾಗಿ ಶ್ರೀ ಮಾನ್ ಬಿ.ಗುಣರಂಜನ್ ಶೆಟ್ಟಿ ರವರು ಆಯ್ಕೆಯಾಗಿದ್ದಾರೆ. ಗುಣರಂಜನ್ ಶೆಟ್ಟಿ ರವರು ಪ್ರಸ್ತುತ ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು , ಐ ಬ್ರಿಗೇಡ್ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ.ದಕ್ಷಿಣ ಭಾರತದ ಪ್ರಸಿದ್ಧ ಚಿತ್ರನಟಿ ಅನುಷ್ಕಾ ಶೆಟ್ಟಿ ರವರ ಸಹೋದರರಾಗಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರು ಮತ್ತು ಉತ್ತರಪ್ರದೇಶದ ಕೇಶರ್ ಗಂಜ್ ನ ಲೋಕಸಭಾ ಸದಸ್ಯರಾದ ಶ್ರೀ ಬ್ರಿಜ್ ಭೂಷಣ್ ಶರಣ್ ಸಿಂಗ್ ರವರು ಶ್ರೀಯುತರಿಗೆ ಅಭಿನಂದಿಸಿದ್ದಾರೆ. ಹಾಗೂ ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರಾದ ರಘುವೀರ್ ಸಿಂಗ್ ಮತ್ತು ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…