ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ವತಿಯಿಂದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿಯಲ್ಲಿ ವಿದ್ಯುದ್ಧಿಕರಣ ಮಾಡಲು ಭೂಗತ ಕೇಬಲ್‌ ಅಳವಡಿಕೆ ಹಾಗೂ ವೀರಗಾರನ ಬೈರನಕೊಪ್ಪ ಎಸ್.ಸಿ ಕಾಲೋನಿಯಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಗ್ರಾಮೀಣ ವಿದ್ಯುದಿಕರಣ (ಒಟ್ಟು 386.72 ಲಕ್ಷಗಳ) ಕಾಮಗಾರಿಗೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಚಾಲನೆ ನೀಡಿದರು.

ಆರು ದಶಕಗಳಿಂದ ಆಗದ ಕೆಲಸ ನಮ್ಮ ಸರ್ಕಾರದ ಅವಧಿಯಲ್ಲಿ ನೆರವೇರಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ರವರಿಗೆ ನಿಕಟ ಪೂರ್ವ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ನವರಿಗೆ ಹಾಗೂ ಲೋಕಸಭಾ ಸಂಸದರಾದ ಬಿ.ವೈ ರಾಘವೇಂದ್ರ ರವರಿಗೆ ಇಂಧನ ಸಚಿವರಾದ ಸುನಿಲ್ ಕುಮಾರ್ ರವರಿಗೆ ಕೃತಜ್ಞತೆ ಸಲ್ಲಿಸಿದರು.

ಬಸಪ್ಪ ಮುಖ್ಯ ಇಂಜಿನಿಯರ್, ಶಶಿಧರ್ ಅಧಿಕ್ಷಕ ಇಂಜಿನಿಯರ್, ತಮ್ಮಡಿಹಳ್ಳಿ ನಾಗರಾಜ್, ಪೆರುಮಾಳ್, ಅರುಣ್, ಸಿಂಗನಹಳ್ಳಿ ಸುರೇಶ್, ಸೂಡೂರು ಸುಧಾಕರ್, ಪ್ರೇಮ ಸುಧಾಕರ್, ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು, ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು..

ವರದಿ ಪ್ರಜಾಶಕ್ತಿ…