ವಿಶಾಖಪಟ್ಟಣ ನ್ಯೂಸ್…

ರಾಷ್ಟ್ರೀಯ ಹಿರಿಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಒಂದು ಬೆಳ್ಳಿ,ಒಂದು ಕಂಚಿನ ಪದಕ ಗಳಿಸಿ ಕರ್ನಾಟಕಕ್ಕೆ ಹೆಮ್ಮೆ ತಂದ ಕುಸ್ತಿ ಪಟುಗಳು ಎಂದು ಕರ್ನಾಟಕ ಕುಸ್ತಿ ಅಸೋಸಿಯೇಷನ್ ಅಧ್ಯಕ್ಷರಾದ ಗುಣ ರಂಜನ್ ಶೆಟ್ಟಿ ಹೇಳಿದ್ದಾರೆ.

ಭಾರತೀಯ ಕುಸ್ತಿ ಸಂಘದ ವತಿಯಿಂದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ ಶಿಫ್ ನಲ್ಲಿ ಎರಡನೇ ದಿನದಂದು ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ ಕುಸ್ತಿಪಟು ಹಳಿಯಾಳದ ಸಂದೀಪ್ ಹಳಲ್ದೆಕರ್‌ರವರು ರಾಷ್ಟ್ರೀಯ ನ್ಯಾಷನಲ್ ಫೈನಲ್ ಪಂದ್ಯಾವಳಿಯಲ್ಲಿ ಪಂಜಾಬಿನ ಕುಸ್ತಿಪಟುವಿನೊಂದಿಗೆ ಪರಾಭವಹೊಂದಿ ಎರಡನೇ ಸ್ಥಾನ ಪಡೆದುಕೊಂಡರೆ, ಮತ್ತೊರ್ವ ಕರ್ನಾಟಕದ ಕುಸ್ತಿಪಟು ದರಿಯಪ್ಪ 87ಕೆಜಿ ತೂಕ ವಿಭಾಗದಲ್ಲಿ ಗ್ರೀಕೋರೋಮನ್ ಸ್ಪರ್ಧೆಯಲ್ಲಿ ಹಣಾಹಣಿ ನಡೆಸಿ ಸೆಮಿಫೈನಲ್ಸ್ ಗೆದ್ದು ಕಂಚಿನ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಹಲವು ವರ್ಷಗಳ ನಂತರ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಇದೇ ಮೊದಲ ಬಾರಿಗೆ ಎರಡು ಪದಕಗಳು ಪಡೆದಿದ್ದಾರೆ.

ಸಂದೀಪ್ ಹೊಳಲ್ದೆಕರ್‌ರವರು ಮೊದಲನೆ ಸುತ್ತಿನಲ್ಲಿ ಮಹಾರಾಷ್ಟ್ರ ಕುಸ್ತಿಪಟುವಿನೊಂದಿಗೆ 5:0 ಅಂತರದಿಂದ ಜಯಗಳಿಸಿದರು.ನಂತರ ಎಸ್‌ಎಸ್‌ಸಿಬಿ ಕುಸ್ತಿಪಟುವಿನೊಂದಿಗೆ ಸೆಮಿಫೈನಲ್ಸ್ ನಲ್ಲಿ ಜಯಗಳಿಸಿ ಅಂತಿಮ ಹಂತ ತಲುಪಿ ಪಂಜಾಬಿನ ಕುಸ್ತಿಪಟುವಿನೊಂದಿಗೆ ಸೆಣಸಾಡಿ ಪರಾಭವಗೊಂಡು ಎರಡನೆ ಸ್ಥಾನಪಡೆದು ಬೆಳ್ಳಿಪದಕ ಪಡೆದಿರುತ್ತಾರೆ. ಈ ಇಬ್ಬರು ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್‌ಶೆಟ್ಟಿ,ಉಪಾಧ್ಯಕ್ಷರಾದರ ಶ್ರೀ ಪ್ರಸಾದ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಶ್ರೀ ಜೆ.ಶ್ರೀನಿವಾಸ್,ಖಜಾಂಚಿಗಳಾದ ಶ್ರೀ ಶ್ರೀನಿವಾಸ ಅಂಗಾರಕೋಡಿ,ಜಂಟಿ ಕಾರ್ಯದರ್ಶಿ ಕುಮಾರ್, ಕರ್ನಾಟಕ ಮುಖ್ಯ ತರಬೇತುದಾರರಾದ ವಿನೋದ್ ಕುಮಾರ್.ಕೆ, ಭಾರತೀಯ ಕುಸ್ತಿ ಸಂಘದ ಗೌರವ ಕಾರ್ಯದರ್ಶಿ ವಿ.ಎನ್.ಪ್ರಸೂದ್, ಸಹ ಕಾರ್ಯದರ್ಶಿ ವಿನೋದ್ ತೋಮರ್ ಪದಕ ತೊಡಿಸಿ ಪ್ರಮಾಣ ಪತ್ರ ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿರವರು ಇದು ಪ್ರಾರಂಭ ಮುಂದಿನ ದಿನಗಳಲ್ಲಿ ಒಲಪಿಂಕ್ಸ್ ಗೆ ಕರ್ನಾಟಕ ತಂಡವನ್ನು ಕಳಿಸುವ ಪ್ರಯತ್ನ ಮಾಡುತ್ತೇವೆ ಮಕ್ಕಳಿಗೆ ಬೇಕಾದ ಉತ್ತಮ ತರಬೇತಿ,ನ್ಯೂಟ್ರಿಶಿಯನ್ ಹಾಗೂ ಎಲ್ಲಾ ತರಹದ ಸವಲತ್ತುಗಳನ್ನು ನೀಡಿ,ಮುಂದಿನ ದಿನಗಳಲ್ಲಿ ಭಾರತದಲ್ಲೆ ಕರ್ನಾಟಕ 1ನೇ ಸ್ಥಾನಕ್ಕೆ ಬರುವ ಹಾದಿಯಲ್ಲಿ ನಾವು ಕೆಲಸ ಮಾಡುವುದರ ಜೊತೆಗೆ ಕುಸ್ತಿ ಪ್ರಿಯರ ಮತ್ತು ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಪದಕಗಳನ್ನು ಗೆಲ್ಲುವ ಕೆಲಸ ಮಾಡುತ್ತೇವೆಂದು ತಿಳಿಸಿದರು.

ವರದಿ ಪ್ರಜಾಶಕ್ತಿ…