ಕರ್ನಾಟಕ ರಾಜ್ಯದಾದ್ಯಂತ ಇರುವ ಸುಮಾರು 58,185 ಬೂತ್ ಗಳಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸುವ ಸದುದ್ದೇಶದಿಂದ ಹಾಗೂ ಪ್ರತಿಯೊಂದು ಬೂತ್ ಗಳಲ್ಲಿ ಪಕ್ಷವನ್ನು ವಿಜಯದ ಹಾದಿಗೆ ತರುವ ದೃಷ್ಟಿಯಿಂದ ಪಕ್ಷದ ಪ್ರತಿ “ಬೂತ್ ಅಧ್ಯಕ್ಷ” ಹಾಗೂ “ಕಾರ್ಯಕರ್ತರ” ಮನೆಗಳಲ್ಲಿ “ರಾಜ್ಯ ಬಿಜೆಪಿ” 2-ಜನವರಿ-2023 ರಿಂದ 12-ಜನವರಿ-2023 ರವರೆಗೆ ಹಮ್ಮಿಕೊಂಡಿರುವ “ಬೂತ್ ವಿಜಯ” ಕಾರ್ಯಕ್ರಮವನ್ನು ಶಿವಮೊಗ್ಗದ ರವೀಂದ್ರ ನಗರದ ವಾರ್ಡ್ 10 ರಲ್ಲಿ ಬರುವ ಜಯನಗರ ಬಡಾವಣೆಯ ಬೂತ್ ನಂ. 68ರ ಅಧ್ಯಕ್ಷರಾದ ಶ್ರೀಮತಿ ಎಸ್.ಆರ್. ಗೀತಾ ಅವರ ನಿವಾಸದಲ್ಲಿ ಈ ವಿನೂತನ ಅಭಿಯಾನಕ್ಕೆ ಪಕ್ಷದ ಧ್ವಜ ನೀಡುವ ಮೂಲಕ ಸೂಡಾ ಮಾಜಿ ಅಧ್ಯಕ್ಷರಾದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀ ನಟರಾಜ್ ಅವರು, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆರತಿ ಅವರು, ಮುಖಂಡರಾದ ಶ್ರೀ ಪ್ರಕಾಶ್ ಅವರು ಸೇರಿದಂತೆ ಬೂತ್ ಮತ್ತು ವಾರ್ಡ್ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…