ತೀರ್ಥಹಳ್ಳಿ ತಾಲೂಕಿನ ಸ.ಕಿ.ಪ್ರಾ.ಶಾಲೆ ಬಸವನಗದ್ದೆ ಶಾಲೆಯಲ್ಲಿ 74 ನೇ ಗಣರಾಜ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ಮುಖ್ಯ ಶಿಕ್ಷಕಿ ಅನಿತಾ ರವರು ಶಾಲಾ ಮಕ್ಕಳಿಗೆ ಹಲವು ರಾಷ್ಟ್ರನಾಯಕರ ವೇಷ ಭೂಷಣಗಳನ್ನು ಹಾಕಿಸಿ ಭಾಷಣ ದೇಶ ಭಕ್ತಿಗೀತೆ ಹಾಡಿಸಲಾಯಿತು.

ಶಾಲಾಭಿವ್ರುದ್ದಿ ಸಮಿತಿಯ ಅಧ್ಯಕ್ಷರಾದ ಕೆ.ಬಿ.ಚಂದ್ರ ಸುರೇಶ, ಅರವಿಂದ ಮಾಲಾ ,ಶಾರದಾ ,ವಿನೋದ ,ಹಣಗೆರೆ ಗ್ರಾಮ ಪಂಚಾಯಿತಿ ಸದಸ್ಯರು ಸರೋಜ ಈಶ್ವರ್ , ರವೀಶ್ ಹಾಗೂ ಗ್ರಾಮಸ್ಥರಾದ ಕೃಷ್ಣ ಮೂರ್ತಿ ಇನ್ನಿತರರು ಹಳೆಯ ವಿಧ್ಯಾರ್ಥಿಗಳು ಶಾಲಾ ಮಕ್ಕಳು ಉಪಸ್ಥಿತರಿದ್ದರು.ಮಕ್ಕಳು ರಾಷ್ಟ್ರನಾಯಕರ ಪೋಷಾಕಿನಲ್ಲಿ ಕಂಗೊಳಿಸುತ್ತಿದ್ದು, ದೇಶಪ್ರೇಮ ಮೆರೆದರು.ಗ್ರಾಮದಲ್ಲಿ ಘೋಷಣೆ ಕೂಗೂತ್ತಾ ಮೆರವಣಿಗೆ ಸಾಗಿದರು.ಕೊನೆಯದಾಗಿ ಶಾಲಾ ಮುಖ್ಯ ಶಿಕ್ಷಕಿ ಸರ್ವರನ್ನು ವಂದಿಸಿದರು.

ವರದಿ ಪ್ರಜಾ ಶಕ್ತಿ…