ಕುಡ್ಲ ನ್ಯೂಸ್…

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ರವರು ಪತ್ರಿಕಾಗೋಷ್ಠಿ ನಡೆಸಿದರು.

ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಾ ಸಮಾಜಕ್ಕೂ ನಿಗಮ ಸರಕಾರದಿಂದ ಸಹಾಯ ಸಿಗುತ್ತಿದೆ, ಆದರೆ ಬಂಟರಿಗೆ ಅಂತ ಸಹಕಾರ ನಿಗಮ ಬಂದಿಲ್ಲ. ಇದುವರೆಗೂ ನಾವು ಹೋರಾಟ ಮಾಡಿಲ್ಲ ಇದರ ಅರ್ಥ ನಮಗೆ ಶಕ್ತಿ ಇಲ್ಲ ಎಂದಲ್ಲ ಬಂಟ ಸಮಾಜದ ಐವರು ಶಾಸಕರು ಇಬ್ಬರು ವಿಧಾನ ಪರಿಷತ್ ಸದಸ್ಯರು ಒಬ್ಬರು ಸಂಸತ್ ಸದಸ್ಯರು ಇವರೆಲ್ಲ ನಮ್ಮ ಬೇಡಿಕೆ ಈಡೇರಿಸಬೇಕಿತ್ತು ಇದಕ್ಕಾಗಿ ನಮ್ಮ ಅಗತ್ಯವಿರಲಿಲ್ಲ ಈಗ ನಮ್ಮ ನಾಯಕರನ್ನು ಸಮಾಜ ಪ್ರಶ್ನಿಸುತ್ತಿದೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಂಟರು ಬ್ರಾಹ್ಮಣರಿಗೂ ನಿಗಮದ ಭರವಸೆ ನೀಡಲಾಗಿದೆ ಅದಕ್ಕಿಂತ ಮೊದಲು ಸರಕಾರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಬಂಟ ಸಮುದಾಯ ಮೇಲ್ನೋಟಕ್ಕೆ ಅತ್ಯಂತ ಶ್ರೀಮಂತ ಸಮುದಾಯವಾಗಿ ಕಂಡುಬರುತ್ತಿದ್ದರು ಶೇಕಡ 25ರಷ್ಟು ಮಂದಿ ಮಧ್ಯಮ ಮತ್ತು ಬಡತನ ರೇಖೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.ಇದುವರೆಗೂ ಬಂಟ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಯನ್ನು ಯಾವುದೇ ಆಡಳಿತ ಪಕ್ಷಗಳು ಕೊಟ್ಟಿಲ್ಲ ಐದು ಜನ ಶಾಸಕರು ಬಂಟರಾಗಿದ್ದರು ಸಮುದಾಯಕ್ಕೆ ಸಹಾಯ ಮಾಡಿದರೆ ಇತರ ಸಮುದಾಯಕ್ಕೆ ಕೋಪ ಬರುಬಹುದೇ ಎನ್ನುವ ಅಳುಕು ಇರಬಹುದು ಎಂದು ತಿಳಿಸಿದರು.

ಬಿಲ್ಲವರಿಗೆ ನಿಗಮ ಆಗಿತ್ತು ಸಂತೋಷ ಅವರಿಗೆ ಶಾಸಕರು ಸಚಿವರು ಬೆಂಬಲ ನೀಡಿದ್ದಾರೆ ಆದರೆ ನಮ್ಮವರು ಏನು ಮಾಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ ರಸ್ತೆ ವಿಚಾರದಲ್ಲಿ ಸುಂದರ ಶೆಟ್ಟಿ ಅವರ ಹೆಸರು ಬಂದಾಗ ಎಲ್ಲಾ ಬಂಟರು ಒಗ್ಗಟ್ಟಾಗಿದ್ದರು ವಿಶ್ವದಾದ್ಯಂತ ಇರುವ ಬಂಟರನ್ನು ಧರಿಸಿ ಪ್ರತಿ ಕ್ಷೇತ್ರದಲ್ಲೂ ಓರ್ವ ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ 5000 ಮತಗಳನ್ನು ಪಡೆದರು ಗೆಲ್ಲುವ ಅಭ್ಯರ್ಥಿಯನ್ನು ಸೋಲಿಸುವ ಸಾಮರ್ಥ್ಯ ನಮಗಿದೆ ಎಂದು ಎಚ್ಚರಿಸಿದರು.

ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷರಾದ ಐಕಳ ಭಾವ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ ಒಂದು ಅಭ್ಯರ್ಥಿಯನ್ನು ಗೆಲ್ಲಿಸುವ ಮತ್ತು ಸೋಲಿಸುವ ಶಕ್ತಿ ಬಂಟ ಸಮಾಜಕ್ಕಿದೆ ನಮ್ಮ ಸಮಾಜದ ಇವರು ಶಾಸಕರು ಸಮಾಜದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಯಾವ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತಾರೋ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಚುನಾವಣೆಗೆ ನಿಲ್ಲುವವರಿಗೆ ಬೆಂಬಲ!
ಈಗಿನ ಸರಕಾರ ಬೇಡಿಕೆಯನ್ನು ಏಡೇರಿಸುತ್ತಿದ್ದರೆ ಬಂಟ ಸಮುದಾಯದ ಪ್ರತಿನಿಧಿಯಾಗಿ ಲೋಕಸಭಾ ಚುನಾವಣೆಗೆ ನಿಲ್ಲುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಈಕಳ ನಮಗೆ ಯಾರ ಮೇಲೂ ವಯಕ್ತಿಕ ಹಂಗೆ ತನವಿಲ್ಲ ಅಲ್ಲದೆ ನಾನು ಎಂದೋ ಚುನಾವಣೆಗೆ ನಿಂತಿದ್ದರೆ ಶಾಸಕ ಸಚಿವ ನಾಗುತ್ತಿದ್ದೆ. ಹಾಲಾಡಿಯವರನ್ನು ಹೊರತು ಪಡಿಸಿ ಇತರ ಎಲ್ಲರೂ ನನಗಿಂತ ಕಿರಿಯ ರಾಗಿದ್ದು ನಾನು ಬೆಂಬಲ ನೀಡಿದ್ದೇನೆ ಈಗ ನನಗೆ ವಯಸ್ಸಾಗಿತ್ತು ನಮ್ಮ ಸಮುದಾಯವನ್ನು ಬೆಂಬಲಿಸುವವರಿಗೆ ನಾವು ಬೆಂಬಲ ನೀಡುತ್ತೇವೆ ಆಗಲಾರದು ನಮ್ಮ ಬೇಡಿಕೆ ಈಡೇರಿಸದ ಬಗ್ಗೆ ಈಗಿನ ಶಾಸಕರಿಗೆ ಪಶ್ಚಾತಾಪ ಆಗಬಹುದು ಎಂದರು.

ವರದಿ ಪ್ರಜಾ ಶಕ್ತಿ ಶಿವಮೊಗ್ಗ…