ಅಕ್ಷರ ಶಾಲೆಯಲ್ಲಿರುವ ಭೂತೇಶ್ವರ ಗುಡಿಯನ್ನು ಧ್ವಂಸಗೊಳಿಸಿದ ಆರೋಪದಲ್ಲಿ ಶಾಸಕ ಅಶೋಕ್ ನಾಯಕ್ ರವರ ಅಣಕು ಶವಯಾತ್ರೆಯನ್ನು ಶ್ರೀ ಕತ್ತಲ ಘಟ್ಟ ಚೌಡೇಶ್ವರಿ ಮತ್ತು ಭೂತೇಶ್ವರ ಸ್ವಾಮಿ ಹಿಂದೂ ಧಾರ್ಮಿಕ ರಕ್ಷಣಾ ವೇದಿಕೆ ನವಲೆಯಿಂದ ಮಹಾವೀರ ವೃತ್ತದ ವರೆಗೆ ಪ್ರತಿಭಟನೆ ನಡೆಸಿದರು.

ಶಾಸಕ ಅಶೋಕ್ ನಾಯಕ್ ಭೂತೇಶ್ವರ ಗುಡಿಯನ್ನು ಧ್ವಂಸಗೊಳಿಸಿದ್ದಾರೆ ಇಂದು ಆರೋಪಿಸಿ ವಾರದ ಹಿಂದೆ ರಸ್ತೆ ತಡೆ ನಡೆಸಲಾಗಿತ್ತು ಇವತ್ತು ಮತ್ತೊಂದು ಸುತ್ತಿನ ಪ್ರತಿಭಟನೆ ಅಂಗವಾಗಿ 7 ಕಿ.ಮೀ ದೂರದಿಂದ ಪಾದಯಾತ್ರೆ ನಡೆಸಿರುವ ಪ್ರತಿಭಟನಾಕಾರರು ಗೋಪಿವೃತ್ತದ ವರೆಗೆ ಅಣಕು ಶವಯಾತ್ರೆ ನಡೆಸಿದರು.

ಅಕ್ಷರ ಶಾಲೆಯನ್ನು ತೆರವು ಗೊಳಿಸಬೇಕೆಂದು ಕೆರೆಯ ಅಭಿವೃದ್ಧಿಗಾಗಿ ಪರಿಶಿಷ್ಟ ಪಂಗಡ ಜನಾಂಗದ ಅಲ್ಲದಿದ್ದರೂ ಸರ್ಕಾರದಿಂದ 80 ಲಕ್ಷ ರೂ ಅನುದಾನ ಪಡೆಯಲಾಗಿದೆ ಅನುಕೂಲಕ್ಕೆ ತಕ್ಕಂತೆ ಹಣವನ್ನು ದುರುಪಯೋಗ ಮಾಡಲಾಗಿದೆ ಆದ್ದರಿಂದ ತನಿಖೆಗೆ ಒಳಪಡಿಸಬೇಕು ಶಾಸಕ ಅಶೋಕ್ ನಾಯಕ್ ವಿರುದ್ಧ ತನಿಖೆ ನಡೆಸುಬೇಕು. ಈ ಸಂದರ್ಭದಲ್ಲಿ ಪ್ರತಿಭಟನೆ ಮೆರವಣಿಗೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮುಖಂಡರು ಕಾರ್ಯಕರ್ತರು ಸಂಘಟನೆ ಕಾರ್ಯಕರ್ತರು ಮೊದಲದ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ:ಸುರೇಶ್ ಬಿ ಎಸ್…