ಶಿವಮೊಗ್ಗ ಸರ್ಜಿ ಫೌಂಡೇಶನ್‌ ಹಾಗೂ ಸರ್ಜಿ ಸೂಪರ್‌ ಸ್ಪೆಷಾಲಿಟಿ ವತಿಯಿಂದ ಗಾಂಧಿಬಜಾರ್‌ ಶ್ರೀ ಭಗವಾನ್‌ ಮಹಾವೀರ ಸಮುದಾಯ ಭವನದಲ್ಲಿ ಮಹಾವೀರ ಜಯಂತಿ ಅಂಗವಾಗಿ ಮಂಗಳವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಶಿಬಿರದಲ್ಲಿ ಕೀಲು ಮತ್ತು ಮೂಳೆ ತಜ್ಞ ಡಾ.ಮಂಜುನಾಥ್‌ ಹಾಗೂ ಪಿಜಿಷಿಯನ್‌ ಡಾ.ಶೂನ್ಯ ಸಂಪದ್‌ ಅವರು ಮಹಿಳೆಯರು, ವೃದ್ಧರು ಹಾಗೂ ಪುರುಷರು ಸೇರಿದಂತೆ 180 ಕ್ಕೂ ಹೆಚ್ಚು ಮಂದಿಗೆ ತಪಾಸಣೆ ನಡೆಸಿ, ಸಲಹೆ ಸೂಚನೆ ನೀಡಿದರು.

ಈ ಸಂದರ್ಭ ಸರ್ಜಿ ಆಸ್ಪತ್ರೆಯ ದಾದಿಯರು ಹಾಗೂ ಸಿಬ್ಬಂದಿ ಹಾಜರಿದ್ದರು.

ವರದಿ ಪ್ರಜಾ ಶಕ್ತಿ…