ಮಹಾನಗರ ಪಾಲಿಕೆಯ ಮತ ಜಾಗೃತಿ ಕಾರ್ಯ ಮುಂದು ವರೆದಿದೆ. ಮತ ಜಾಗೃತಿ ಆರಂಭವಾಗಿ ಇಂದಿಗೆ 7 ದಿನಗಳು ಕಳೆದಿದ್ದು ಮುಂಬತ್ತಿ ಜಾಥಾ, ತ್ರಿಚಕ್ರ ವಾಹಾನಗಳ ಜಾಥಾ, ವಾರ್ಡ್ ಗಳಲ್ಲಿ ಮತ ಜಾಗೃತಿ ಕಾರ್ಯಕ್ರಮ ದಿನಾಲು ನಡೆಯುತ್ತಿದೆ.

ಚುನಾವಣೆಯ ಮತದಾನಕ್ಕೆ  29 ದಿನಗಳು ಬಾಕಿ ಇದೆ. ಇಂದು ನಹಾನಗರ ಪಾಲಿಕೆ ಸ್ವೀಪ್ ಸಮಿತಿ ಗೋಪಾಳದ ಕೊರಮರ ಬೀದಿ, ಹಳೆ ಮಂಡ್ಲಿಯಲ್ಲಿ ವಾರ್ಡ್ ಗಳಿಗೆ ತೆರಳಿ ಜಾಗೃತಿ ಮೂಡಿಸಲಾಗಿದೆ.

ಮತ ಜಾಗೃತಿಗಾಗಿ ನಾಳೆ ಬೈಕ್ ಜಾಥಾ ನಡೆಯಲಿದೆ. ಬೈಕ್ ಜಾಥಾ ಪಾಲಿಕೆಯಿಂದ ಆರಂಭವಾಗಲಿದೆ. ಗೋಪಿ ವೃತ್ತ, ಅಮೀರ್ ಅಹಮದ್ ಸರ್ಕಲ್, ಅಶೋಕ ವೃತ್ತ, ಬಸ್ ಸ್ಟ್ಯಾಂಡ್, ಮಂಡ್ಲಿ, ಬೈಪಾಸ್, ಎಂಆರ್ ಎಸ್ ಸರ್ಕಲ್, ಹೊಳೆ ಬಸ್ ಸ್ಟಾಪ್, ಶಂಕರ್ ಮಠ ರಸ್ತೆಗೆ ಬಂದು ಕೆಇಬಿ ವೃತ್ತದಲ್ಲಿ ಅಂತ್ಯವಾಗಲಿದೆ. ಈ ಜಾಥಾ ನಾಳೆ 4.30 ನಡೆಯಲಿದೆ.

ವರದಿ ಪ್ರಜಾ ಶಕ್ತಿ…