ಸೊರಬದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರು ಮಧು ಬಂಗಾರಪ್ಪ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಒಳ್ಳೆಯ ವಾತಾವರಣವಿದೆ ಎಂದು ಹೇಳಿದರು.

ಶಿವರಾಜಕುಮಾರ್ ಮಾತನಾಡಿ ತಂದೆ ಬಂಗಾರಪ್ಪನವರನ್ನು ಹೇಗೆ ಹಿಂದೆಯೂ ಗೆಲ್ಲಿಸುತ್ತಿದ್ದರು ಅದೇ ರೀತಿ ಮಧು ಬಂಗಾರಪ್ಪನವನ್ನು ಗೆಲ್ಲಿಸಬೇಕು ಎಂದು ಹೇಳಿದರು.ಗೀತ ಶಿವರಾಜ್ ಕುಮಾರ್ ಮಾತನಾಡಿ ಮಧು ಬಂಗಾರಪ್ಪ ಅವರನ್ನು ಅತ್ಯಧಿಕ ಪದಗಳಿಂದ ಗೆಲ್ಲಿಸಿ ಅವರು ನಿಮ್ಮ ಸೇವೆ ಮಾಡಲು ಸದಾ ಸಿದ್ಧ ಎಂದರು.

ತಂದೆಯವರನ್ನ ನೆನಪಿಸಿಕೊಂಡ ಗೀತಾ ಶಿವರಾಜ್ ಕುಮಾರ್ ಮಾಜಿ ಸಿಎಂ ದಿ. ಧರ್ಮಸಿಂಗ್, ಮಲ್ಲಿಕಾರ್ಜುನ್ ಖರ್ಗೆಯವರು ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರಿಗೆ ಕಣ್ಣಿದ್ದಂತೆ ಎಂದು ಹೇಳಿ ಭಾವುಕರಾಗಿದ್ದರು.

ನಾನು ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಈ ವೇಳೆ ಯಾರು ಎಲ್ಲಿಕರೆದರೂ ಪ್ರಚಾರಕ್ಕೆ ಹೋಗುವೆ. ಮೈಸೂರಿನ ವರುಣ, ಹುಬ್ವಳ್ಳಿ,ಸಾಗರ, ಕನಕಪುರ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಸದ್ಯಕ್ಕೆ ಪ್ರಚಾರಕ್ಕೆಹೋಗುತ್ತಿದ್ದು ನಟ ಶಿವರಾಜ್ ಕುಮಾರ್ ಸಹ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದೇನೆ. ತಮ್ಮನ ಕೆಲಸದಮೇಲೆ ಮತ ನೀಡಲು ಕೋರುವೆ ಎಂದರು.

ವರದಿ ಪ್ರಜಾ ಶಕ್ತಿ…