ಶಿವಮೊಗ್ಗ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ಮಲೆನಾಡು ಓಪನ್ ಕರಾಟೆ ಪಂದ್ಯಾವಳಿಯನ್ನು ಶಿವಮೊಗ್ಗ ಜಿಲ್ಲೆಯ ಆಡಿಷನಲ್ ಎಸ್ಪಿ ಶ್ರೀ ಅನಿಲ್ ಕುಮಾರ್ ಬೂಮರೆಡ್ಡಿ ರವರು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾನು ಸಹ ಕರಾಟೆಪಟುವಾಗಿದ್ದು ತಾನು ಬಾಲ್ಯದ ದಿನಗಳಲ್ಲಿ ಗದಗದಲ್ಲಿ ಅಭ್ಯಾಸ ಮಾಡಿದ ಬಗ್ಗೆ ಹಂಚಿಕೊಂಡು ತನ್ನ ಗುರುಗಳ ಬಗ್ಗೆ ಹೇಳಿ ಕ್ರೀಡಾಕೂಟದ ಆರಂಭದ ಫೈಟ್ ಅನ್ನು ಕಂಡು ಉತ್ತಮವಾಗಿ ಆಟವಾಡಿದ ಕ್ರೀಡಾಪಟುವನ್ನು ಎತ್ತಿ ಹಿಡಿದು ಪ್ರೋತ್ಸಾಹಿಸಿ ಎಲ್ಲ ಕ್ರೀಡಾಪಟುಗಳೊಂದಿಗೆ ಬೆರೆತು ಆನಂದಿಸಿದರು.

ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಶಿವಮೊಗ್ಗ ವಿನೋದ್ ಸೇರಿದಂತೆ ಪದಾಧಿಕಾರಿಗಳಾದ ರಾಘವೇಂದ್ರ ಸಚಿನ್ ನರಸಿಂಹಸ್ವಾಮಿ ಜಸ್ಟಿನ್ ಸೈಯದ್ ರಿಯಾಜ್ ಆರಿಫ್ ಪಂಚಪ್ಪ ಶ್ರೇಯಸ್ ಹರ್ಷಿತ್ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…