ಜಿಲ್ಲಾಡಳಿತ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಕೋಲಾರ ಇವರು ದಿನಾಂಕ-5-11-2023 ರಿಂದ 7-11-2023 ರವರೆಗೆ ಬೆಂಗಳೂರು ವಿಭಾಗ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಪ್ರ್ೌಢಶಾಲಾ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಶ್ರೀತಿಪ್ಪೇಸ್ವಾಮಿ ಪ್ರ್ೌ ಢಶಾಲೆ ಅರನಲ್ಲಿ ಇವರು ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಕುಮಾರಿ ಸಿಂಚನ.ಹೆಚ್ ಪಡೆದಿರುತ್ತಾರೆ.ಸಾಧನ,ನಾಗಶ್ರೀ ದೀಕ್ಷಿತಾ ,ಸಪ್ನ , ಉಷಾ, ನಮಿತಾ, ಜ್ಞಾನ, ಶ್ರಾವ್ಯ, ಐಶ್ವರ್ಯ, ದೀಕ್ಷಾ ಮತ್ತು ಸಂಜನಾ ಭಾಗವಹಿಸಿದ ಕ್ರೀಡಾಪಟುಗಳು.ತಂಡದ ವ್ಯವಸ್ಥಾಪಕರಾಗಿ‌ ಗೀತಾ, ಮತ್ತು ಕೋಚ್ ರೇವಣಪ್ಪ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದರು.