ಶಿವಮೊಗ್ಗದ ವಿನಾಯಕ ನಗರದ ರೋಟರಿ ಬ್ಲಡ್ ಬ್ಯಾಂಕ್ ನಲ್ಲಿ ವಿಧಾನಪರಿಷತ್ ಶಾಸಕರಾದ ಶ್ರೀ ಡಿ ಎಸ್ ಅರುಣ್ ಅವರು ತಮ್ಮ ಜನ್ಮದಿನದ ಹಿನ್ನೆಲೆ ಅವರ ಸ್ನೇಹಿತರೊಂದಿಗೆ 40ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರು. ನಂತರ ಸಾಂಕೇತಿಕವಾಗಿ ಬಟ್ಟೆ ಹೊಲಿಯುವ ಯಂತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಟೆಕ್ನೋರಿಂಗ್ಸ್ ನ ಭೂಪಾಳಂ ಶಶಿಧರ್, ಭಜರಂಗದಳ ರಾಜೇಶ್ ಗೌಡ, ಅಶ್ವತ್ಥ್ ನಾರಾಯಣ, ಮುರುಳಿ ಅವರು, ಅಮರ್ ಅವರು, ದೀಪಕ್, ಸುರೇಶ್ ಬಾಬು, ಮೋಹನ್, ಮಧುಸೂಧನ್, ದೇವರಾಜ್ , ಹರ್ಷ ಪಟೇಲ್, ನಾಗರಾಜ್ ನಾಡಿಗ್ ಸುರೇಶ್ ಹಾಗೂ ಡಿ ಎಸ್ ಅರುಣ್ ಅಭಿಮಾನಿಗಳ ಬಳಗದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…