ಕಂಬಳ ನ್ಯೂಸ್…

ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 25 ಮತ್ತು 26ರಂದು ನಡೆಯುವ ಕಂಬಳ ಕೂಟಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಈ ಎರಡು ದಿನಗಳ ಕಾಲ ನಡೆಯುವ ಕಂಬಳ ಕೂಟಕ್ಕೆ ದೇಶ ವಿದೇಶಗಳಿಂದ ಕಂಬಳ ಪ್ರಿಯರು ಆಗಮಿಸುತ್ತಿದ್ದಾರೆ.200 ಕು ಹೆಚ್ಚು ಕೋಣಗಳು ಕರಾವಳಿ ಮತ್ತು ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ಅರಮನೆ ಮೈದಾನಕ್ಕೆ ಬಂದಿದ್ದಾವೆ. ಈ ಕಾರ್ಯಕ್ರಮಕ್ಕೆ ರಾಜ್ಯ ದೇಶ ವಿದೇಶಗಳಿಂದ ಲಕ್ಷಾಂತರ ಕಂಬಳ ಪ್ರಿಯರು ಬರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅನುಷ್ಕಾ ಶೆಟ್ಟಿ ಮುಂತಾದ ಚಿತ್ರನಟರು ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಶ್ರೀ ಸದಾನಂದ ಗೌಡರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರು, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಗೋಲ್ಡ್ ಫಿಂಚ್ ಮಾಲಿಕರಾದ ಪ್ರಕಾಶ್ ಶೆಟ್ಟಿ ಗುಣರಂಜನ್ ಶೆಟ್ಟಿ ಗುರುಕಿರಣ್ ರವರು ಸೇರಿದಂತೆ ಪ್ರಮುಖರಿದ್ದರು.

ವರದಿ ಪ್ರಜಾಶಕ್ತಿ…