ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ. ಕರ್ನಾಟಕ ದಲಿತ ಸಂಘರ್ಷ ಸಮಿತಿ ‘ರಿ’ ಜಿಲ್ಲಾ ಶಾಖೆ ಶಿವಮೊಗ್ಗ ವತಿಯಿಂದ ದಿನಾಂಕ 13/01/2024 ರ ಬೆಳಿಗ್ಗೆ 11:30ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ತಾಯಿ ಸಾವಿತ್ರಿ ಬಾಯಿ ಪುಲೆ ರವರ ಜನ್ಮ ಜಯಂತಿ ಹಾಗೂ ಕುವೆಂಪು ಜನ್ಮ ಶತಮಾನೋತ್ಸವ ಹಾಗೂ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ನುಡಿ ನಮನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕರಾದ ಅರಮಗಟ್ಟ ರಂಗಪ್ಪ ವಹಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಸಮಿತಿಯ ರಾಜ್ಯ ಸಂಚಾಲಕರಾದ ಶ್ರೀ ಡಿಆರ್ ಪಾಂಡುರಂಗ ಸ್ವಾಮಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಭರ್ಮಪ್ಪ ಅಂದಾಸುರ ಸಂಘಟನಾ ಸಂಚಾಲಕರಾದ ಶ್ರೀ ತರೀಕೆರೆ ವೆಂಕಟೇಶ್ ಹಾಗೂ ರಾಜ್ಯ ಕಜಾಂಚಿಯಾದ ಶ್ರೀ ಮುನಿಯಪ್ಪ ಭಾಗವಹಿಸಿದ್ದು ವಿಶೇಷ ಅತಿಥಿಗಳಲ್ಲೊಬ್ಬರಾದ ಬಗರು ಹುಕುಂ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ತಿಮ್ಮಲಾಪುರ ಲೋಕೇಶ್ ಹಾಗೂ ಹಿರಿಯ ಮುಖಂಡರಾದ ಎಸ್ ಲೂಯಿಸ್ ಭಾಗವಹಿಸಿದ್ದರು.

ಹಾಗೂ ಜಿಲ್ಲಾ ಸಮಿತಿಯ ಸಂಘಟನಾ ಸಂಚಾಲಕರುಗಳಾದ ಶ್ರೀ ಡಿಕೆ ರಮೇಶ್ ಹಬ್ಬನಘಟ್ಟ. ಶ್ರೀ ಪರಶುರಾಮ ಯಲವಟ್ಟಿ. ಸುರೇಶ ಅಮರಘಟ್ಟ. ಜೆ ಟಿ ಸದಾಶಿವ ಹಾಗೂ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುನಿತಾ ರಾಜ್ ಹಾಗೂ ಎಲ್ಲ ತಾಲೂಕಿನ ಪದಾಧಿಕಾರಿಗಳು ಭಾಗಿಯಾಗಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಿದರು.
ಎಂದು ಶಿವಮೊಗ್ಗ ಜಿಲ್ಲಾ ಸಂಚಾಲಕರಾದ ಹರಮಘಟ್ಟ ರಂಗಪ್ಪ ರವರು ತಿಳಿಸಿದರು.