• ಹಾವೇರಿಯಲ್ಲಿ ದ್ವಿತೀಯ ಮಹಿಳಾ ಸಮ್ಮೇಳನ_೨೦೨೪ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

ಶಿವಮೊಗ್ಗ : ದಿ 28 ಭಾನುವಾರ ಕರುನಾಡ ಹಣತೆ ಕವಿ ಬಳಗ.(.ರಿ) ಚಿತ್ರದುರ್ಗ ಮಹಿಳಾ ಇದರ ವತಿಯಿಂದ ದ್ವಿತೀಯ ಮಹಿಳಾ ಸಮ್ಮೇಳನ_೨೦೨೪. ಹಾವೇರಿಯ ಶ್ರೀ ಬಸವಕೇಂದ್ರ, ಹೊಸಮಠದಲ್ಲಿ ನಡೆದಿದ್ದು ಈ ಕಾರ್ಯಕ್ರಮದಲ್ಲಿ ನಾಡಿನ ಎಲ್ಲಾ ಜಿಲ್ಲೆಯ ಕವಿಗಳು ಭಾಗವಹಿಸಿದ್ದರು ಹಾಗೂ ಪುಸ್ತಕ ಲೋಕಾರ್ಪಣೆ, ರಾಜ್ಯ ಪ್ರಶಸ್ತಿ ಪ್ರದಾನ, ಕನ್ನಡ ಬುಕ್ ಆಫ್ ರೆಕಾರ್ಡ್ಸ್ ನ ವತಿಯಿಂದ ಶರಣ ಶರಣೆಯರ ಕುರಿತಾಗಿ ದಾಖಲೆ ಬರಹ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಯುವ ಪತ್ರಕರ್ತ ಅರುಣ್ ಮಂಜುನಾಥ್ ರಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರುನಾಡ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಸಮ್ಮೇಳನ ಅಧ್ಯಕ್ಷರಾದ ಶ್ರೀಮತಿ ಅಮಜ್ಜವ ಬಾಳೇಶ ಭೋವಿ ಹಾಗೂ ಕಾರ್ಯಕ್ರಮ ದಿವ್ಯ ಸಾನಿಧ್ಯ ಪರಮ ಪೂಜ್ಯ ಶ್ರೀ ಬಸವಶಾಂತಲಿಂಗ ಸ್ವಾಮಿಜಿ , ಸಂಸ್ಥಾಪಕರಾದ ಕನಕಪ್ರೀತೀಶ್ , ಮಹಿಳಾ ರಾಜ್ಯಧ್ಯಕ್ಷರಾದ ಶ್ರೀಮತಿ ರೇಖಾ ಶಿವರಾಮ್ ಭಟ್ ಕವಿ ಕುಸುಮಗಳು ಇದ್ದರು.