ಶಿವಮೊಗ್ಗ ನಗರದಲ್ಲಿ ಸ್ವೀಪ್ ವತಿಯಿಂದ ಗೋಪಾಳದಲ್ಲಿನ ನಿವಾಸಿಗಳ ಜೊತೆ ಮತದಾನದ ಹಬ್ಬ ಜಾಗೃತಿ ಕಾರ್ಯಕ್ರಮವನ್ನು ಮಹಿಳೆಯರಿಗೆ ರಂಗೋಲಿ ಬಿಡಿಸುವುದರ ಮೂಲಕ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೂ ಯುಗಾದಿ ಹಬ್ಬದ ಪ್ರಯುಕ್ತ ಅರಿಶಿನ ಕುಂಕುಮ ಕೊಡುವುದರ ಮೂಲಕ ಸಂಪ್ರದಾಯವಾಗಿ ಆಚರಿಸಲಾಯಿತು.ಮತದಾನ ಜಾಗೃತಿ ಗೀತೆ, ಕೋಲಾಟ, ಬೀದಿ ನಾಟಕದ ಮೂಲಕ ಮತದಾನ ಮಾಡುವಂತೆ ಮನವಿ ಮಾಡಲಾಯ್ತು.ಈ ಕಾರ್ಯಕ್ರಮ ದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ತಂಡ ನೇಸರ ಕಲಾವಿದರ ತಂಡ, ಸ್ಟೈಲ್ ಡಾನ್ಸ್ ತಂಡ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ ಪ್ರಜಾ ಶಕ್ತಿ