BYR ನಾಮಪತ್ರ ಸಲ್ಲಿಕೆ…

ಭಾರತೀಯ ಜನತಾ ಪಕ್ಷದ  ಅಭ್ಯರ್ಥಿಯಾಗಿ ಬಿ ವೈ ರಾಘವೇಂದ್ರ  ಅವರು ಚುನಾವಣಾಧಿಕಾರಿಗಳಾದ ಗುರುದತ್ತ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದರು.

ರಾಮಣ್ಣ ಶೆಟ್ಟಿ ಪಾರ್ಕಿನಿಂದ ಅದ್ದೂರಿ ಮೆರವಣಿಗೆ ಕಾರ್ಯಕರ್ತರ ಪಡೆಯೊಂದಿಗೆ ಗಾಂಧಿ ಬಜಾರ್ ನೆಹರು ರೋಡ್ ಗೋಪಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೆಚ್ ಡಿ ಕುಮಾರಸ್ವಾಮಿ ರವರು ರಾಘವೇಂದ್ರ ಗೆ ಸಾತ್ ನೀಡಿದರು.

ಮೆರವಣಿಗೆಯಲ್ಲಿ ಕಾರ್ಯಕರ್ತರ ಮತ್ತೊಮ್ಮೆ ಮೋದಿ ಮಗದೊಮ್ಮೆ ರಾಘಣ್ಣ ಎನ್ನುವ ಘೋಷ ವಾಕ್ಯ ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ಶಾಸಕರಾದ ಚನ್ನಬಸಪ್ಪ ಆರಗ ಜ್ಞಾನೇಂದ್ರ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾಜಿ ಶಾಸಕರಾದ ಹರತಾಳು ಹಾಲಪ್ಪ ಕುಮಾರ್ ಬಂಗಾರಪ್ಪ ಜೆಡಿಎಸ್ ಶಾಸಕರಾದ ಶಾರದ ಪೂರ್ಯ ನಾಯ್ಕ್ ವಿಧಾನಪರಿಷತ್ ಸದಸ್ಯರಾದ ರುದ್ರೆ ಗೌಡ್ರು ಡಿಎಸ್ ಅರುಣ್ ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ