ಭಾರತೀಯ ಜನತಾ ಪಕ್ಷ ಶಿಕಾರಿಪುರ ಮಂಡಲ ಇಂದು ಹೊಸೂರು ಮಹಾಶಕ್ತಿ ಕೇಂದ್ರ ಹಾಗೂ ಮಟ್ಟಿಕೋಟೆ ಭಾಗದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಆಯೋಜಿಸಿದ್ದ ಬೃಹತ್ “ಸಾರ್ವಜನಿಕ ಸಭೆ” ಯಲ್ಲಿ ಭಾಗಿಯಾಗಿ ಮಾನ್ಯ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ BS Yediyurappa ಅವರೊಂದಿಗೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ನೆರೆದಿದ್ದ ಅಪಾರ ಪ್ರಮಾಣದ ಜನಸಾಮಾನ್ಯರನ್ನು ಉದ್ದೇಶಿಸಿ ಮಾತನಾಡಲಾಯಿತು.

ಪ್ರಧಾನಿ ಶ್ರೀ Narendra Modi ನೇತೃತ್ವದ ಸರ್ಕಾರವು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ಎಂಬ ಘೋಷವಾಕ್ಯದಡಿ ಸರ್ವರನ್ನು ಒಳಗೊಂಡಂತೆ ಅಂತ್ಯೋದ್ಯಯ ಪರಿಕಲ್ಪನೆಯಡಿ ಅನುಷ್ಠಾನಕ್ಕೆ ತಂದಿರುವ ಸ್ವಾತಂತ್ರ್ಯ ಭಾರತದ ನೂರಾರು ಐತಿಹಾಸಿಕ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಸಭೆಯ ಮುಂದೆ ತೆರೆದಿಟ್ಟು, ಈ ಎಲ್ಲ ಯೋಜನೆಗಳ ಪ್ರತಿ ಬೂತ್ ಮಟ್ಟದಲ್ಲಿರುವ ಅರ್ಹ ಫಲಾನುಭವಿಗಳನ್ನು ಸಂಪರ್ಕಿಸಿ ಮತದಾನದ ದಿನದಂದು ಪಕ್ಷಕ್ಕೆ ಹೆಚ್ಚಿನ ಬಲ ತರುವಂತೆ ಕಾರ್ಯಕರ್ತರಿಗೆ ಕಾರ್ಯನಿರ್ವಹಿಸಲು ಕರೆಕೊಡಲಾಯಿತು.

ನನ್ನ ಲೋಕಸಭಾ ಅವಧಿಯಲ್ಲಿ ಕೇಂದ್ರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜಾರಿಗೊಳಿಸಿರುವ ಯೋಜನೆಗಳ ಕುರಿತು ಪ್ರಸ್ತಾಪಿಸಿ ಬರುವ ಮೇ 7 ರಂದು ಕಮಲದ ಗುರುತಿನ ಕ್ರ.ಸಂಖ್ಯೆ 2ಕ್ಕೆ ತಮ್ಮ ಅತ್ಯಮೂಲ್ಯ ಮತವನ್ನು ನೀಡಿ ಅತ್ಯಧಿಕ ಮತಗಳ ಅಂತರದಿಂದ ವಿಜಯಮಾಲೆಯನ್ನು ಧರಿಸಲು ಸಹಕಾರ ನೀಡುವಂತೆ ನೆರೆದಿದ್ದವರಲ್ಲಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಗುರುಮೂರ್ತಿ ಅವರು, ಶ್ರೀ ಅಶೋಕ್ ನಾಯಕ್ ಅವರು, ಶ್ರೀ ಹನುಮಂತಪ್ಪ ಅವರು, ಶ್ರೀ ಗುರುರಾಜ್ ಅವರು, ಶ್ರೀ ಶಿವಪ್ಪ ಅವರು ಅವರು, ಶ್ರೀ ಭೂಕಾಂತ್ ಅವರು, ಶ್ರೀ ರುದ್ರೇಶ್ ಅವರು ಸೇರಿದಂತೆ ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ