ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಹೋಟಲ್ ಶುಭಂ ನಲ್ಲಿನ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಜೊತೆಗೆ ಮ್ಯೂಸಿಕಲ್ ಛೇರ್ ಆಟ ಆಡಿಸಲಾಯಿತು.ಇದೇ ಸಮಯದಲ್ಲಿ ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಶ್ರೀಮತಿ ಅನುಪಮಾ ಸುಪ್ರಿಯಾ ಹಾಗೂ ಸ್ವೀಪ್ ತಂಡದವರು ಮತ್ತು ಶುಭಂ ಹೋಟಲ್ ಮಾಲೀಕರು ಕಾರ್ಮಿಕರು ಪಾಲ್ಗೊಂಡಿದ್ದರು.

ಹೋಟೆಲ್ ಮಾಲೀಕರದ ಉದಯ್ ಕಡಂಬ ಮತ್ತು ಚಂದ್ರಕುಮಾರ್ ಶೆಟ್ಟಿ ಮಂಜುನಾಥ್ ಶೆಟ್ಟಿ ಮಾತನಾಡಿ ಮೇ 07 ಚುನಾವಣೆಯಂದು 12 ಗಂಟೆ ಮುಂಚಿತವಾಗಿ ಮತಾ ಚಲಾಯಿಸಿ ನಮ್ಮ ಹೋಟೆಲ್ ಗೆ ಬಂದವರಿಗೆ ಬೆಳಗಿನ ತಿಂಡಿ ಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.

ವರದಿ ಪ್ರಜಾ ಶಕ್ತಿ