ಆಲ್ಕೊಳ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ -26 ರಂದು ಬೆಳಗ್ಗೆ 09.00 ರಿಂದ ಸಂಜೆ 5.00ರ ವರಗೆ ರಾಜೇಂದ್ರನಗರ, ರವೀಂದ್ರನಗರ, ಗಾಂಧಿನಗರ, ಎ.ಎನ್.ಕೆ.ರಸ್ತೆ, ಅಚ್ಯುತ್‍ರಾವ್ ಬಡಾವಣೆ, ಚನ್ನಪ್ಪ ಬಡಾವಣೆ, ಸವಳಂಗರಸ್ತೆ, ಹನುಮಂತನಗರ, ಜೈಲ್‍ರಸ್ತೆ, ವೆಂಕಟೇಶ್‍ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಅಪರಿಚಿತ ಮೃತ ವ್ಯಕ್ತಿಯ ವಾರಸ್ಸುದಾರರ ಪತ್ತೆಗೆ ಮನವಿ

ಶಿವಮೊಗ್ಗ, ಮೇ 24 (ಕರ್ನಾಟಕ ವಾರ್ತೆ): ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶರ್ಮದಾನದಿಯಲ್ಲಿ ಸುಮಾರು 40-45 ವಯಸ್ಸಿನ ಗಂಡಸಿನ ಮೃತ ದೇಹವು ತೇಲುತ್ತಿದ್ದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇರುತ್ತದೆ. ಈ ವ್ಯಕ್ತಿಯ ಹೆಸರು, ವಿಳಾಸ ಪತ್ತೆಯಾಗಿರುವುದಿಲ್ಲ. ಚಹರೆ 5.03 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಈ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ಎಸ್.ಪಿ ಕಚೇರಿ ಶಿವಮೊಗ್ಗ- 08182-261400, ತೀರ್ಥಹಳ್ಳಿ ಡಿ ವೈ.ಎಸ್.ಪಿ-9480803337, ಹೊಸನಗರ ಪಿಎಸ್‍ಐ -9480803364 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ವರದಿ ಪ್ರಜಾ ಶಕ್ತಿ