“ವಿಶ್ವ ಚಾಂಪಿಯನ್ ಭಾರತ!🇮🇳🏏🏆

ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಅಭಿನಂದನೆಗಳು ಸಲ್ಲಿಸಿದ್ದಾರೆ.ಈ ಗೆಲುವಿಂದ ಶತಕೋಟಿ ಭಾರತೀಯರ ಕನಸುಗಳನ್ನು ನನಸಾಗಿಸಿ ನಮ್ಮ ದೇಶಕ್ಕೆ ಅಪಾರ ಸಂತೋಷ ಮತ್ತು ಗೌರವವನ್ನು ತಂದಿದ್ದೀರಿ ಎಂದರು.ಈ ವಿಜಯೋತ್ಸವವನ್ನು ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಶ್ರೀ ಡಿ ಎಸ್ ಅರುಣ್ ಅವರು ಕ್ರೀಡಾ ಪಟುಗಳು, ಮಕ್ಕಳೊಂದಿಗೆ ಸಿಹಿ ಹಚ್ಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಅಮರ್, ಮುರುಳಿ, ಸ್ವಾಮಿ ,ಧೀರರಾಜ್ ಹೊನ್ನವಿಲೆ, ಮಂಜು, ರುದ್ರೇಶ್, ಅಶೋಕ್, ಸ್ವಾಮಿ ಸರ್, ರಾಜು, ಹನುಮಂತು ಹಾಗೂ ಕ್ರೀಡಾಪಟುಗಳು ಇದ್ದರು.

ವರದಿ ಪ್ರಜಾ ಶಕ್ತಿ