ಮಾನ್ಯ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ರವರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರು, ಶಿವಮೊಗ್ಗ ಉಪವಿಭಾಗರವರ ಮಾರ್ಗದರ್ಶನದಲ್ಲಿ ದಿನಾಂಕ 30/07/2021 ರಂದು ಸಮಯ ರಾತ್ರಿ 10 ಗಂಟೆಗೆ ಎ1 ಆರೋಪಿಯಾದ ನವೀನ್ ಬಿನ್, ಚಂದ್ರನಾಯ್ಕ ಎ2 ಆರೋಪಿಯಾದ ಮಂಜುನಾಥ ಬಿನ್, ಪ್ರಭುನಾಯ್ಕ ಇವರು ಆಯನೂರು ಹಣಗಕೆರೆ ರಸ್ತೆ ಚನ್ನ ಹಳ್ಳಿ ಕ್ರಾಸ್ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಗಾಂಜಾ ಹೊಂದಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭೂಪತಿ ಎಂ ಅಬಕಾರಿ ನಿರೀಕ್ಷಕರು ವಲಯ-2 ಹಾಗೂ ಉಪ ನಿರೀಕ್ಷಕರಾದ ವೇಣಗೋಪಾಲ , ಸಿಬ್ಬಂದಿಗಳಾದ ಶ್ರೀ ಸಂತೋಷ್, ಅರುಣ ಬಂಡಾರಿ, ಅಬಕಾರಿ ಕಾನ್ ಸ್ಟೆಬಲ್ಗಳು ಹಾಗೂ ವಾಹನ ಚಾಲಕರಾದ ನವೀನ ಇವರೊಂದಿಗೆ ದಾಳಿ ನಡೆಸಲಾಗಿ ಎ1 ಆರೋಪಿಯನ್ನು ಬಂಧಿಸಿದ್ದು ಎ2 ಅರೋಪಿತನು ಪರಾರಿಯಾಗಿರುತ್ತಾನೆ. ಎ1 ಆರೋಪಿಯು ಮಾರಾಟ ಉದ್ದೇಶದಿಂದ ಅಕ್ರಮವಾಗಿ ಹೊಂದಿರುವ 105 ಗ್ರಾಂ ಒಣ ಗಾಂಜಾ ಹಾಗೂ ಎ2 ಆರೋಪಿಯ ಸ್ಯಾಮ್ ಸಂಗ್ ಮೊಬೈಲ್ನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆ 1985 ಯಡಿ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಲಯ ವಶಕ್ಕೆ ನೀಡಲಾಯಿತು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153