ಶ್ರೀ ಮುರುಳಿಧರ್, 64 ವರ್ಷ, ಹುತ್ತಾ ಕಾಲೋನಿ ಭದ್ರಾವತಿ ರವರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾರದಾ ಮಂದಿರ ಎದುರು ನಿಂತಿದ್ದಾಗ 4-5 ಜನ ಹುಡುಗರು ಮುರುಳಿಧರ್ ರವರಿಗೆ ಹೆದರಿಸಿ ಅವರ ಬಳಿ ಇದ್ದ ಉಂಗುರ, ಕೊರಳಿನ ಚಿನ್ನದ ಸರ, ಹಣ ಮತ್ತು ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 0124/2024 ಕಲಂ 308 (2) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಪ್ರರಕಣದಲ್ಲಿ ಸುಲಿಗೆ ಮಾಡಿಕೊಂಡ ಹೋದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ. ಕೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮ ರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರ್ಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಶ್ರೀ ನಾಗರಾಜ್ ಪೊಲೀಸ್ ಉಪಾದೀಕ್ಷಕರು ಭದ್ರಾವತಿ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ ಶ್ರೀಶೈಲ ಕುಮಾರ್ ಸಿಪಿಐ ಭದ್ರಾವತಿ ನಗರ ವೃತ್ತ ರವರ ನೇತೃತ್ವದಲ್ಲಿ ನ್ಯೂ ಪೊಲೀಸ್ ಠಾಣೆಯ ಶ್ರೀ ಟಿ. ರಮೇಶ ಪಿ.ಎಸ್.ಐ, ಶ್ರೀಮತಿ ಭಾರತಿ ಪಿ ಎಸ್ ಐ, ಮತ್ತು ಹಳೆನಗರ ಪೊಲೀಸ್ ಠಾಣೆಯ ಶ್ರೀ ಚಂದ್ರಶೇಖರ ನಾಯ್ಕ ಪಿ.ಎಸ್.ಐ ಹಾಗೂ ಸಿಬ್ಬಂಧಿಗಳಾದ ನ್ಯೂ ಟೌನ್ ಪೊಲೀಸ್ ಠಾಣೆಯ ಶ್ರೀ ಟಿ ಪಿ ಮಂಜಪ್ಪ ಎ ಎಸ್ ಐ, ಸಿ.ಹೆಚ್.ಸಿ ನವೀನ್, ಸಂತೋಷ ನಾಯ್ಕ, ಮತ್ತು ಸಿಪಿಸಿ ಪ್ರಸನ್ನ ಹಾಗೂ ಹಳೆನಗರ ಪೊಲೀಸ್ ಠಾಣೆಯ ಸಿ.ಹೆಚ್.ಸಿ ಹಾಲಪ್ಪ, ಸಿಪಿಸಿ ಮೌನೇಶ ಶಿಕಲ್, ಚಿಕ್ಕಪ್ಪ ಎಪ್ ಎಸ್, ಪ್ರವೀಣ್ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿಗಳಾದ 1) ಜಬೀವುಲ್ಲಾ @ ಮಲ್ಲಿ, 23 ವರ್ಷ, ಮೊಮಿನ್ ಮೊಹಲ್ಲಾ ಅನ್ವರ್ ಕಾಲೋನಿ ಭದ್ರಾವತಿ ಮತ್ತು 2) ಮಹಮದ್ ಗೌಸ್ @ ಗುಂಡಾ, 24 ವರ್ಷ, ಮೊಮಿನ್ ಮೊಹಲ್ಲಾ ಅನ್ವರ್ ಕಾಲೋನಿ, ಭದ್ರಾವತಿ ಇವರನ್ನು ದಸ್ತಗಿರಿ ಮಾಡಿ, ಆರೋಪಿಗಳಿಂದ ಅಂದಾಜು ಮೌಲ್ಯ 1,59,000/- ರೂ ಗಳ 24.5 ಗ್ರಾಂ ತೂಕದ ಬಂಗಾರದ ಕೊರಳ ಸರ ಮತ್ತು ಉಂಗುರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 35,000/- ರೂ ಗಳ ಬೈಕ್ ಸೇರಿ ಒಟ್ಟು 1,94,000/- ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ವರದಿ ಪ್ರಜಾ ಶಕ್ತಿ