DR.ಗುರುಕಿರಣ್ ಶೆಟ್ಟಿ…

ಸಂಗೀತ ಲೋಕದ ದಿಗ್ಗಜ ಗುರುಕಿರಣ್ ಇನ್ನು ಮುಂದೆ ಡಾ. ಗುರುಕಿರಣ್ ಆಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೆಪ್ಟಂಬರ್ 10ರಂದು 59ನೇ ವಾರ್ಷಿಕೋತ್ಸವ ಪ್ರಯುಕ್ತ ಗೌರವ ಡಾಕ್ಟರೇಟ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸಂಗೀತ ಸಾಮ್ರಾಟ್ ನಿರ್ದೇಶಕ ಗುರುಕಿರಣ್ ರವರಿಗೆ ಡಾಕ್ಟರೇಟ್ ಬಿರುದನ್ನ ನೀಡಿ ಬೆಂಗಳೂರು ವಿದ್ಯಾಲಯದಿಂದ ಸನ್ಮಾನಿಸಿದರು. ಗುರುಕಿರಣ್ ರವರು ಮೂಲತ ಕರಾವಳಿ ಮಂಗಳೂರು ಭಾಗದ ಬಂಟರ ಸಮಾಜದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 25 ವರ್ಷದಿಂದ ಸಾವಿರಾರು ಚಿತ್ರಗಳಿಗೆ ಉತ್ತಮ ಸಂಗೀತ ನೀಡುತ್ತಾ ಬಂದಿದ್ದಾರೆ. ಅವರು ನೀಡಿದಂತಹ ಚಿತ್ರಗಳಿಗೆ ಹಲವು ಪ್ರಶಸ್ತಿ ಕೂಡ ಬಂದಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಇವರಿಂದ ಇನ್ನೂ ಹೆಚ್ಚು ಒಳ್ಳೆಯ ಚಿತ್ರಗಳು ಮೂಡಿ ಬರಲಿ ಎಂದು ಚಿತ್ರ ಅಭಿಮಾನಿಗಳು ಆಶಿಸಿದ್ದಾರೆ.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *