ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ, ಶ್ರೀ ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಗೋಪಾಲ ಕೃಷ್ಣ ಟಿ ನಾಯಕ್, ಪೊಲೀಸ್ ಉಪಾಧಿಕ್ಷಕರು, ಸಾಗರ ಉಪ ವಿಭಾಗ, ಶ್ರೀ ರಜೀಶ್, ಅಸ್ಸಿಸ್ಟೆಂಟ್ ಕಮಾಂಡೆಂಟ್ ಆರ್.ಎ.ಎಫ್ ರವರ ನೇತೃತ್ವದಲ್ಲಿ, ಸಾಗರ ಟೌನ್ ನಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ವನ್ನು ಹಮ್ಮಿಕೊಂಡಿದ್ದು, ಪಥ ಸಂಚಲನವನ್ನು ಸಾಗರ ನಗರದ ಎಸ್. ಎನ್. ವೃತ್ತದಿಂದ ಪ್ರಾರಂಭಿಸಿ ಆವಿನಳ್ಳಿ ರಸ್ತೆ, ಎಸ್ ಎನ್ ನಗರ, ಜನ್ನತ್ ನಗರ, ಉಪ್ಪಾರಕೇರಿ ಸರ್ಕಲ್, ಆಜಾದ್ ಮಸೀದಿ ರಸ್ತೆ, ಅಶೋಕ ರಸ್ತೆ, ಸಾಗರ ಸರ್ಕಲ್ ನಿಂದ ಜೆ. ಸಿ. ಸರ್ಕಲ್ ಗೆ ಮುಕ್ತಾಯ ಮಾಡಲಾಗಿರುತ್ತದೆ.

ಪೊಲೀಸ್ ಪಥ ಸಂಚಲನದಲ್ಲಿ ಶ್ರೀ ಸೀತಾರಾಂ, ಪಿಐ ಸಾಗರ ಟೌನ್ ಪೊಲೀಸ್ ಠಾಣೆ ಮತ್ತು ಸಾಗರ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು, ಸಿಬ್ಬಂಧಿಗಳು ಮತ್ತು ಆರ್. ಎ. ಎಫ್ ನ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಭಾಗವಹಿಸಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *