ಶಿವಮೊಗ್ಗ
ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಹುಟ್ಟು ಹಬ್ಬದ ಪ್ರಯುಕ್ತ ಶಿವಮೊಗ್ಗದಲ್ಲಿ ವಿಶಿಷ್ಟವಾಗಿ ಆಚರಣೆ.

ಭಾರತ ಕಂಡ ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟು ಹಬ್ಬದ ಪ್ರಯುಕ್ತ
ಶಿವಮೊಗ್ಗದ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಭಗತ್ ಸಿಂಗ್ ಅವರ ಜನ್ಮದಿನವನ್ನು ಗಾಂಧಿ ಬಜಾರ್ ನಲ್ಲಿ ಅರ್ಥಬದ್ಧವಾಗಿ ಆಚರಣೆ ಮಾಡಿದರು.ಗಾಂಧಿಬಜಾರ್ ನ ಉಪ್ಪಾರ್ ಕೇರಿಯಲ್ಲಿ ಭಗತ್ ಸಿಂಗ್ ಭಾವಚಿತ್ರಕ್ಕೆ ಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಶುಭಾಶಯ ಕೋರಿದರು.

ನಂತರ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಅಂಗನವಾಡಿ ಮಕ್ಕಳಿಗೆ ಡ್ರಾಯಿಂಗ್ ಬುಕ್ ಹಾಗೂ ಬಣ್ಣದ ಪೆನ್ಸಿಲ್ ಗಳನ್ನು ವಿತರಣೆ ಮಾಡಲಾಯಿತು.
ಇದರ ಜೊತೆ ವೃದ್ಧರಿಗೆ ಹಾಗೂ ಅಂದರಿಗೆ ಬೆಡ್ ಶೀಟ್ ಗಳನ್ನ ಹಂಚುವ ಮೂಲಕ ಜನ್ಮ ಜನ್ಮದಿನೋತ್ಸವ ವನ್ನು ಅರ್ಥಪೂರ್ಣವಾಗಿ ನೆರವೇರಿಸಲಾಯಿತು.

ಈ ವೇಳೆ ನೆರೆದಿದ್ದ ಹಲವರಿಗೆ ಸಿಹಿ ಹಂಚಿದರು.ಈ ಸಂದರ್ಭದಲ್ಲಿ ಮಂಜು ಆರ್ ಟಿ ಆರ್ ಅರುಣಗಿರಿ ಅಣ್ಣಕ್ಕಿಳಿ ಶಶಿಕುಮರ್ ನಾಯ್ಕ್ ,ವರುಣ್ ವಿನಯ್ ಸಂಜಯ್ ಶಬರೀಶ್ ರಂಜಿತ್ ಶ್ರೇಯಸ್ ಭುವನ್ ಗುರು ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *